ಬಂಡಿಕೊಡಿಗೇಹಳ್ಳಿ ತಾಲ್ಲೂಕು ಪಂಚಾಯಿತಿಗೆ ಜೆಡಿ(ಎಸ್) ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ನಾಗರಾಜ್ ಅವರು, ಬದಲಿ ಅಭ್ಯರ್ಥಿಯೆಂದು ‘ಬಿ’ ಫಾರಂ ನೀಡಿದ್ದರಿಂದ ಮತ್ತು ಮಾದರಿ ಸಹಿ ಮತ್ತು ಮತಪತ್ರದಲ್ಲಿ ಅವರ ಹೆಸರು ಹೇಗಿರಬೇಕೆಂಬ ಬಗ್ಗೆ ಲಿಖಿತ ಹೇಳಿಕೆ ಸಲ್ಲಿಸದ ಹಿನ್ನೆಲೆಯಲ್ಲಿ ಹಾಗೂ ಹುಣಸಮಾರನಹಳ್ಳಿ ತಾಲ್ಲೂಕು ಪಂಚಾಯಿತಿಗೆ ಜೆಡಿ(ಎಸ್) ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ರಾಜ ಅವರು ಜಾತಿ ಮತ್ತು ಘೋಷಣಾ ಪ್ರಮಾಣ ಪತ್ರ ನೀಡದೆ ಇರುವುದು ಹಾಗೂ ನಾಮಪತ್ರ ಸರಿಯಾದ ರೀತಿಯಲ್ಲಿ ಭರ್ತಿಮಾಡದ ಹಿನ್ನೆಲೆಯಲ್ಲಿ ಇವರಿಬ್ಬರ ನಾಮಪತ್ರಗಳು ತಿರಸ್ಕೃತಗೊಂಡವು.