ತಮ್ಮ ಕ್ಷೇತ್ರ ಬಾಗ್ಫತ್ ಪರಿಸ್ಥಿತಿ ಅವಲೋಕನಕ್ಕೆ ತೆರಳುತ್ತಿದ್ದಾಗ ಲೋನಿ ಎಂಬಲ್ಲಿ ಪೊಲೀಸರ ವಶಕ್ಕೆ ಒಳಗಾದ ವೇಳೆ ಅಜಿತ್ ಸಿಂಗ್, `ರಾಜ್ಯದಲ್ಲಿನ ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ನಿಸ್ಸಂದೇಹವಾಗಿ ಸಮಾಜವಾದಿ ಪಕ್ಷದ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದೆಯೇ...? ಆಗಲೇ ಹಿಂಸಾಚಾರ ನಿಲ್ಲಬೇಕಿತ್ತು' ಎಂದಿದ್ದಾರೆ.