ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಜನತಾದಳಕ್ಕೆ ಆಯ್ಕೆ

Last Updated 21 ಜುಲೈ 2013, 20:21 IST
ಅಕ್ಷರ ಗಾತ್ರ

ನೆಲಮಂಗಲ: ಜೆಡಿಎಸ್ ತಾಲ್ಲೂಕು ಘಟಕದ ಯುವ ಜನತಾದಳದ ಉಪಾಧ್ಯಕ್ಷರಾಗಿ ಎಸ್.ಪ್ರವೀಣ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಯುವ ಜನತಾದಳದ ಅಧ್ಯಕ್ಷ ಕೆ.ವಿ.ಸತ್ಯಪ್ರಕಾಶ್ ತಿಳಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಉಪಾಧ್ಯಕ್ಷರ ಆಯ್ಕೆ ವಿಷಯ ತಿಳಿಸಿದ ಸತ್ಯಪ್ರಕಾಶ್ ಅವರು ತಾಲ್ಲೂಕು ಯುವ ಘಟಕ ವನ್ನು ಹೆಚ್ಚು ಕ್ರಿಯಾಶೀಲವಾಗಿ ಸಂಘಟಿಸುವ ಜವಾಬ್ದಾರಿ ಪ್ರವೀಣ್ ಅವರ ಮೇಲಿದೆ ಎಂದರು.

ಶಾಸಕ ಡಾ.ಶ್ರೀನಿವಾಸಮೂರ್ತಿ, ಮುಖಂಡರಾದ ಕೇಶವಮೂರ್ತಿ, ಗಂಗಣ್ಣ, ಜಿ.ಪಂ. ಸದಸ್ಯ ಕಾಂತರಾಜು, ಪುರಸಭಾ ಸದಸ್ಯ ಎನ್.ಪಿ.ಹೇಮಂತ ಕುಮಾರ್, ಪಿಳ್ಳಪ್ಪ, ಎಂ.ಬಿ.ಟಿ. ರಾಮಕೃಷ್ಣಪ್ಪ, ಲಕ್ಷ್ಮೀ ನಾರಾಯಣ್ ಉಪಸ್ಥಿತರಿದ್ದು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT