ಆಗ್ರಾ (ಪಿಟಿಐ): ಉಚಿತವಾಗಿ ದಿನಪತ್ರಿಕೆ ನೀಡಲು ಒಪ್ಪದ ಯುವಕನ ಮೇಲೆ ಬಿಜೆಪಿ ಮುಖಂಡರ ಪುತ್ರನೊಬ್ಬ ಗುಂಡು ಹಾರಿಸಿರುವ ಘಟನೆ ಬೆಳಕಿಗೆ ಬಂದಿದೆ.
`ಬಿಜೆಪಿ ಮುಖಂಡ ರಾಣಾ ಪ್ರತಾಪ್ ಅವರ ಪುತ್ರ ವಿಕಾಸ್ ಮತ್ತು ಆತನ ಗೆಳೆಯ ಅಜಿತ್, 22 ವರ್ಷದ ರಾಮ್ ಕುಮಾರ್ಗೆ ಮನಬಂದಂತೆ ಥಳಿಸಿದ್ದಾರೆ. ಅನಂತರ ಯುವಕನ ಎದೆಗೆ ಗುಂಡು ಹೊಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ರಾಮ್ಗೆ ಇಲ್ಲಿನ ಸರೋಜಿನಿ ನಾಯ್ಡು ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪರಿಸ್ಥಿತಿ ಚಿಂತಾಜನಕವಾಗಿದೆ~ ಎಂದು ಪೊಲೀಸರು ತಿಳಿಸಿದ್ದಾರೆ.