ಇನ್ನೊಂದೆಡೆ ರಥದಲ್ಲಿ ಕಾಣಿಸಿದ ತಾಂತ್ರಿಕ ದೋಷದಿಂದಾಗಿ ಆರಂಭದಲ್ಲಿಯೇ ಯಾತ್ರೆಗೆ ವಿಘ್ನಗಳು ಎದುರಾದವು. ಯಾತ್ರೆಗಾಗಿಯೇ ವಿಶೇಷವಾಗಿ ರಥದ ಮಾದರಿಯಲ್ಲಿ ಸಿದ್ಧಪಡಿಸಲಾದ ಬಸ್ ಮಂಗಳವಾರ ಛಾಪ್ರಾದಿಂದ ಇಲ್ಲಿಗೆ ಆಗಮಿಸುವಾಗ ತೊಂದರೆ ಕಾಣಿಸಿಕೊಂಡಿತು. ಹೊಗೆ ಹೊರ ಹಾಕುವ ಕೊಳವೆ ಕೆಟ್ಟುಹೋದ ಕಾರಣ ಜನರೇಟರ್ ಭಾರಿ ಪ್ರಮಾಣದ ಇಂಗಾಲದ ಮೋನಾಕ್ಸೈಡ್ ಉಗುಳಲು ಆರಂಭಿಸಿತು. ಜೇಟ್ಲಿ, ಸುಷ್ಮಾ ಅವರಿಗೆ ಉಸಿರಾಟದ ತೊಂದರೆ ಆರಂಭವಾಯಿತು. ಹೀಗಾಗಿ ಮಾರ್ಗ ಮಧ್ಯದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಯಿತು.