ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಮಧ್ಯದ ಮಸೀದಿ, ದೇವಸ್ಥಾನ ತೆರವು

Last Updated 23 ಡಿಸೆಂಬರ್ 2013, 19:51 IST
ಅಕ್ಷರ ಗಾತ್ರ

ಯಲಹಂಕ: ಕೆಂಪೇಗೌಡ ಅಂತರ­ರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ವಿದ್ಯಾನಗರ ಕ್ರಾಸ್‌ ಬಳಿ ರಸ್ತೆಗೆ ಮಧ್ಯ­ದಲ್ಲಿದ್ದ ಕರಿಮಾ ರಿಯಮ್ಮ ದೇವಸ್ಥಾನ ಹಾಗೂ ವೆಂಕಟಾಲ ಸಮೀಪ ರಸ್ತೆಗೆ ಹೊಂದಿಕೊಂಡಿದ್ದ ಮಸೀದಿಯನ್ನು ಜಿಲ್ಲಾಧಿಕಾರಿ ಅವರ ಆದೇಶದ ಮೇರೆಗೆ ಸೋಮವಾರ ತೆರವು ಗೊಳಿಸ­ಲಾಯಿತು.

ಬೆಂಗಳೂರು ಉತ್ತರ ಉಪವಿಭಾ­ಗಾಧಿಕಾರಿಗಳು ಹಾಗೂ ತಹ ಶೀಲ್ದಾರ್‌ ನೇತೃತ್ವದ ತಂಡ ಪೊಲೀಸ್‌ ಭದ್ರತೆಯೊಂದಿಗೆ ಕಾರ್ಯಾ­ಚರಣೆ ನಡೆಸಿ, ಕರಿಮಾರಿ ಯಮ್ಮ ದೇವಸ್ಥಾ­ನವನ್ನು ತೆರವು ಗೊಳಿಸಲು ಮುಂದಾ­ದರು. ಈ ಸಂದರ್ಭ ಅಧಿಕ ಸಂಖ್ಯೆ­ಯಲ್ಲಿ  ಜಮಾಯಿಸಿದ್ದ ಸ್ಥಳೀ­ಯರು ಕಾರ್ಯಾಚರಣೆಗೆ ತಡೆ­ಯೊಡ್ಡಿ, ಜನರ ಧಾರ್ಮಿಕ ಭಾವನೆಗೆ ಧಕ್ಕೆ ಬರುವು­ದರಿಂದ ಯಾವುದೇ ಕಾರಣಕ್ಕೂ ದೇವಸ್ಥಾನವನ್ನು ತೆರವು ಗೊಳಿಸ­ಬಾರದು ಎಂದು ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ಸ್ಥಳೀಯರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು, ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ನಂತರ ಪೊಲೀಸರು ಪ್ರತಿಭಟನಾ­ಕಾರರ ಮನವೊಲಿಸಿ, ತೆರವು ಕಾರ್ಯಾ­ಚರಣೆಗೆ ಅನುವು ಮಾಡಿಕೊಟ್ಟರು.

‘ದೇವಾಲಯವನ್ನು ತೆರವು ಗೊಳಿಸುವಂತೆ ಈಗಾಗಲೆ ಸಂಬಂಧ­ಪಟ್ಟವರಿಗೆ ಐದಾರು ಬಾರಿ ನೋಟಿಸ್‌ ಜಾರಿಗೊಳಿಸಿ, ಕಾಲಾ ವಕಾಶ ನೀಡಲಾ­ಗಿತ್ತು. ಆದರೂ ತೆರವುಗೊಳಿಸಿಲ್ಲ. ರಾಷ್ಟ್ರೀ ಯ ಹೆದ್ದಾರಿಯ ವಿಸ್ತರಣೆ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಜಿಲ್ಲಾಧಿ ಕಾರಿಗಳ ಆದೇಶದ ಮೇರೆಗೆ ತೆರವುಗೊಳಿಸಲಾಗಿದೆ’ ಎಂದು ಬೆಂಗಳೂರು ಉತ್ತರ (ಹೆಚ್ಚುವರಿ) ತಹಶೀಲ್ದಾರ್‌ ಬಾಳಪ್ಪ ಹಂದಿಗುಂದ ತಿಳಿಸಿದರು.

ಇದೇ ರೀತಿ ರಸ್ತೆಗೆ ಹೊಂದಿಕೊಂ­ಡಿರುವ ಯಲಹಂಕದ ಬಾಲಾಜಿ ದೇವ­ಸ್ಥಾನ ಹಾಗೂ ಬ್ಯಾಟರಾ­ಯನಪುರದ ಕೋದಂಡ­ರಾಮ­ಸ್ವಾಮಿ ದೇವಾಲಯ­ವನ್ನು ಶೀಘ್ರದಲ್ಲೆ ತೆರವು­ಗೊ­ಳಿ­ಸಲಾಗು­ವುದು ಎಂದು ಅವರು ಹೇಳಿದರು. ಬೆಂಗಳೂರು ಉತ್ತರ ಉಪವಿ­ಭಾಗಾಧಿಕಾರಿ ಮಹೇಶ್‌­ಬಾಬು, ಈಶಾನ್ಯ ವಿಭಾಗದ ಡಿಸಿಪಿ ಟಿ.ಆರ್‌.ಸುರೇಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT