ಮೈಸೂರು: ಪೇರೆಂಟ್ಸ್ ಟೇಬಲ್ ಟೆನಿಸ್ ಅಕಾಡೆಮಿ (ಪಿಟಿಟಿಎ) ಆಶ್ರಯದಲ್ಲಿ ಜುಲೈ 26ರಿಂದ 29ರವರೆಗೆ ಮೈಸೂರಿನಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ಸ್ಮಾರಕ ಟೇಬಲ್ ಟೆನಿಸ್ ರಾಜ್ಯ ರ್ಯಾಂಕಿಂಗ್ ಟೂರ್ನಿ ನಡೆಯಲಿದೆ.
ಸಿಎಫ್ಟಿಆರ್ಐನ ಜಿಮ್ಖಾನಾದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ನಾನ್ ಮೆಡಲಿಸ್ಟ್ ಸಿಂಗಲ್ಸ್ ಡಬಲ್ಸ್, ಕೆಡೆಟ್, ಸಬ್ ಜೂನಿಯರ್, ಸಬ್ ಜೂನಿಯರ್, ಯೂತ್ ಬಾಲಕ ಮತ್ತು ಬಾಲಕಿಯರು, ವೆಟರನ್ಸ್ ಸಿಂಗಲ್ಸ್ (ಮುಕ್ತ) ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಹೆಸರು ನೋಂದಾಯಿಸಿಕೊಳ್ಳಲು ಜುಲೈ 24 ಕೊನೆಯ ದಿನವಾಗಿದೆ.
ವಿವರಗಳಿಗೆ ಮುಖ್ಯ ರೆಫರಿ ಕೆ. ರಾಮಸ್ವಾಮಿ, ವಿಳಾಸ್: ಎಸ್-1, ಸರೋವರ ಅಪಾರ್ಟ್ಮೆಂಟ್, ನಂ. 32, ರಾಜರಾಜೇಶ್ವರಿ ದೇವಸ್ಥಾನ ರಸ್ತೆ, ಬಸವನಗುಡಿ, ಬೆಂಗಳೂರು -04 (ದೂರವಾಣಿ: 080-26634933) ಅವರನ್ನು ಸಂಪರ್ಕಿಸಬೇಕು.