ಬೆಂಗಳೂರು: ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ದಸರಾ ನಂತರ (ಅಕ್ಟೋಬರ್ ಕೊನೆ ವಾರ) ನಗರಕ್ಕೆ ಬರುತ್ತಿದ್ದು ಆ ಸಂದರ್ಭದಲ್ಲಿ ಯುವಕರ ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಬೆಂಗಳೂರಿನಲ್ಲಿಯೇ ಕಾರ್ಯಕ್ರಮ ನಡೆಯಲಿದೆ. ಸಮಾವೇಶಕ್ಕೆ ಬರುವ ಪ್ರತಿಯೊಬ್ಬರಿಂದ 10 ರೂಪಾಯಿ ಪ್ರವೇಶ ಶುಲ್ಕ ಸಂಗ್ರಹಿಸುವುದು ಮತ್ತು ಹತ್ತು ಲಕ್ಷ ಯುವಕರನ್ನು ಸೇರಿಸುವುದು ನಮ್ಮ ಉದ್ದೇಶ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.