ಜೈನ್ ವಿಶ್ವವಿದ್ಯಾಲಯ: ಶನಿವಾರ ಮತ್ತು ಭಾನುವಾರ ಅಭಿನಯ-ರಾಷ್ಟ್ರೀಯ ರಂಗಭೂಮಿ ಉತ್ಸವ.
ಕನ್ನಡ ಮತ್ತು ಹಿಂದಿ ಸಣ್ಣ ನಾಟಕ ಸ್ಪರ್ಧೆಗಳ ಅಂತಿಮ ಹಂತದಲ್ಲಿ ಶನಿವಾರ ಬೆಳಿಗ್ಗೆ 9ರಿಂದ ಮುಂಬೈನ ಠಾಕೂರ್ ಕಾಲೇಜು ತಂಡದಿಂದ `ಥರ್ಡ್ಬೆಲ್~(ಹಿಂದಿ), ಮುಂಬೈ ಮುನಿಸಿಪಲ್ ಕಾರ್ಪೊರೇಷನ್ ಕ್ರೀಡಾಭವನ ತಂಡದಿಂದ `ರಂಗ್ ನಟರಂಗ್~ (ಹಿಂದಿ), ಒಎಫ್ಸಿ ನಾಟ್ಯ ಕಲಾಸಂಸ್ಥೆಯಿಂದ `ಫಂಡಿ~ (ಹಿಂದಿ), ಮುಂಬೈ ಸಂವೇದನಾ ಪರಿವಾರ ತಂಡದಿಂದ `ತ್ರಿಭುಜ್ ಕಿ ಚೌಟಿ ಬಜು~ (ಹಿಂದಿ), ಏಶಿಕಾ ತಂಡದಿಂದ `ಮೀಡಿಯಾ~ (ಹಿಂದಿ), ಅದಮ್ಯ ರಂಗ ಸಂಸ್ಕೃತಿ ತಂಡದಿಂದ `ಮದುವೆ ಹೆಣ್ಣು~ (ಕನ್ನಡ), ರಂಗಸಿರಿ ತಂಡದಿಂದ `ದಂಗೆಯ ಮುಂಚಿನ ದಿನಗಳು~ (ಕನ್ನಡ) ನಾಟಕಗಳ ಪ್ರದರ್ಶನ.
ಭಾನುವಾರ ಬೆಳಿಗ್ಗೆ 9ಕ್ಕೆ ಅನಾವರಣ ತಂಡದಿಂದ `ಒಂದು ಬೊಗಸೆ ನೀರು~, ರಂಗ ವರ್ತುಲ ತಂಡದಿಂದ `ಸೇವಂತಿ ಪ್ರಸಂಗ~, ಶಾರದಾ ಗಂಗಾ ಕಲಾಮಂದಿರದಿಂದ `ಗೋಧಿ ಹುಗ್ಗಿ ಗಂಗಯ್ಯ~, ರಂಗದರ್ಶನ ಕೇಂದ್ರ ದಿಂದ `ಜಲಗಾರ~, ರಂಗವೈವಿಧ್ಯ ತಂಡದಿಂದ `ಪದ್ಮಪಣಿ~ ಕನ್ನಡ ನಾಟಕಗಳ ಪ್ರದರ್ಶನ.
ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ: ಅತಿಥಿಗಳು: ಶ್ರೀನಿವಾಸಪ್ರಭು, ದತ್ತಾತ್ರೇಯ, ಸುಧಾರಾಣಿ, ಎಸ್.ಶಿವರಾಂ. ಸ್ಥಳ: ಜೆಎಸ್ಎಸ್ ಕಾಲೇಜು ಸಭಾಂಗಣ, 8ನೇ ಬ್ಲಾಕ್, ಜಯನಗರ.