ಬೆಂಗಳೂರು: ಚತ್ತೀಸಗಡದಲ್ಲಿ ಅಕ್ಟೋಬರ್ 16ರಿಂದ 21ರ ವರೆಗೆ ನಡೆಯಲಿರುವ 20ನೇ ಮಿನಿ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ಷಿಪ್ಗೆ ಕರ್ನಾಟಕದ ಬಾಲಕ ಹಾಗೂ ಬಾಲಕಿಯರ ತಂಡವನ್ನು ಕರ್ನಾಟಕ ವಾಲಿಬಾಲ್ ಸಂಸ್ಥೆ ಗುರುವಾರ ಪ್ರಕಟಿಸಿದೆ.
ತಂಡಗಳು ಇಂತಿವೆ: ಬಾಲಕರ ತಂಡ: ವರುಣ್ (ನಾಯಕ), ಪ್ರಜ್ವಲ್, ಮೊಹಮ್ಮದ್ ಫಜಿಲ್, ಶ್ರೀನಿಧಿ, ರೇಣುಕಾರಾಧ್ಯ, ವಿಕಾಸ್, ಮೊಹಮ್ಮದ್ ತಾಯುಫ್, ಯಲ್ಲಣ್ಣ ಗೌಡ, ಶ್ರೀಕಾಂತ್, ಕಾರ್ತಿಕ್, ಸೃಜನ್, ಸೈಫ್ಅಲಿ, ನಾರಾಯಣಸ್ವಾಮಿ ರೆಡ್ಡಿ (ಕೋಚ್, ಬಿಎಎಂಎಲ್) ಹಾಗೂ ಮುನಿಕೃಷ್ಣ (ಸಹಾಯಕ ಕೋಚ್).
ಬಾಲಕಿಯರ ತಂಡ: ಕಾವ್ಯಶ್ರೀ (ನಾಯಕಿ), ಕಾವೇರಿ, ಭಾನುಪ್ರಿಯ, ಚೈತ್ರಾ, ಸೋನಿಕಾ, ಗೌತಮಿ, ಸ್ನೇಹಾ, ಸುಜಾತ, ತೇಜಾ, ಲಕ್ಷ್ಮವ್ವ, ದೀಪಿಕಾ, ತ್ರೀವೇಣಿ, ಮುಕ್ತಾರ ಅಹ್ಮದ್ (ಕೋಚ್, ರಾಯಚೂರು), ಎಸ್.ಜೆ. ಗುರುರಾಜ್ (ಸಹಾಯಕ ಕೋಚ್, ಬೆಂಗಳೂರು) ಹಾಗೂ ಅಪರ್ಣಾ (ಮ್ಯಾನೇಜರ್).