ಇತ್ತೀಚೆಗೆ ಖಾಸಗಿ ಟಿ. ವಿ. ವಾಹಿನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಎಲ್ಲ ವಾಹಿನಿಗಳು ಸುದ್ದಿ ಮತ್ತು ಮನರಂಜನೆಗೆ ಹೆಚ್ಚಿನ ಒತ್ತು ನೀಡಿವೆ. ಆದರೆ ದೇಶದ ಬೆನ್ನೆಲುಬಾದ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ ಇತ್ಯಾದಿ ಬಹುಸಂಖ್ಯಾತ ಜನರ ವೃತ್ತಿಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡುವ ವಿಷಯದಲ್ಲಿ ವಿಫಲವಾಗಿವೆ.
ಆದರೆ ಮುದ್ರಣ ಮಾಧ್ಯಮಗಳು ಈ ವಿಷಯದಲ್ಲಿ ಮುಂದಿವೆ. ಟಿವಿ ಕಾರ್ಯಕ್ರಮಗಳ ಭರಾಟೆಯಲ್ಲಿ ನಮ್ಮ ರೈತರು ರೇಡಿಯೊ ಗಳಲ್ಲಿ `ಕೃಷಿ ಪಾಠ~ ಕಾರ್ಯಕ್ರಮ ಕೇಳುವುದನ್ನು ಮರೆತಿದ್ದಾರೆ. ಹೀಗಾಗಿ ರೈತರ ಹಿತದೃಷ್ಟಿಯಿಂದ ಕನ್ನಡ ದೃಶ್ಯ ಮಾಧ್ಯಮಗಳು ಕೂಡ ರೈತರಿಗೆ ಉಪಯುಕ್ತವಾದ ಮಾಹಿತಿ ನೀಡುವಂತಹ ಕಾರ್ಯಕ್ರಮ ರೂಪಿಸಿ ಬಿತ್ತರಿಸಬೇಕು ಎಂದು ರೈತರ ಪರವಾಗಿ ಮನವಿ ಮಾಡಿಕೊಳ್ಳುತ್ತೇನೆ.
- ಕಂಡಕ್ಟರ್ ರಾಜು, ಗುಬ್ಬಿ