ಕೋಲ್ಕತ್ತ (ಪಿಟಿಐ): ಎರಡು ಸ್ಥಳೀಯ ರೈಲುಗಳು ಮುಖಾಮುಖಿ ಡಿಕ್ಕಿ ಹೊಡೆದು ಚಾಲಕ ಹಾಗೂ ಕೆಲ ಪ್ರಯಾಣಿಕರು ಗಾಯಗೊಂಡ ಘಟನೆ ಕೃಷ್ಣನಗರ- ಶಾಂತಿಪುರ ವಲಯದ ಫುಲಿಯಾ ನಿಲ್ದಾಣದಲ್ಲಿ ಶನಿವಾರ ಸಂಭವಿಸಿದೆ.
ಎದುರಿನಿಂದ ಬಂದ ಶಾಂತಿಪುರ- ಸೆಲ್ಡಾ ರೈಲು, ನಿಲ್ದಾಣದಲ್ಲಿ ನಿಂತಿದ್ದ ಸೆಲ್ಡಾ- ಶಾಂತಿಪುರ ರೈಲಿಗೆ ಡಿಕ್ಕಿ ಹೊಡೆಯಿತು ಎಂದು ಪೂರ್ವ ರೈಲ್ವೆ ಅಧಿಕಾರಿ ಸಮೀರ್ ಗೋಸ್ವಾಮಿ ತಿಳಿಸಿದ್ದಾರೆ.