ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಕ್ಷಿಣೆ ಸಾವು: ಆರೋಪಿಗಳ ಬಂಧನ

Last Updated 19 ಫೆಬ್ರುವರಿ 2011, 4:35 IST
ಅಕ್ಷರ ಗಾತ್ರ

ಕೊಳ್ಳೇಗಾಲ: ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ತಮಿಳುನಾಡಿಗೆ ಪರಾರಿಯಾಗಿದ್ದ ಆರೋಪಿಗಳನ್ನು ತಾಲ್ಲೂಕಿನ ಹನೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎಂ.ಟಿ.ದೊಡ್ಡಿ ವಾಸಿ ಗಿರಿಗೌಡ ಹಾಗೂ ಆತನ ಪುತ್ರ ದೇವರಾಜು ಎಂಬುವವರೇ ಬಂಧಿತ ಆರೋಪಿಗಳು. ಕೊಳ್ಳೇಗಾಲ ತಾಲ್ಲೂಕಿನ ಭದ್ರಯ್ಯನಹಳ್ಳಿ ಸುಧಾ (26) ಅವರನ್ನು ಇದೇ ತಾಲ್ಲೂಕಿನ ಎಂ.ಟಿ.ದೊಡ್ಡಿ ನಿವಾಸಿ ಗಿರಿಗೌಡನ ಮಗ ದೇವರಾಜು ಜೊತೆ 2 ವರ್ಷಗಳ ಹಿಂದೆ ವಿವಾಹವಾಗಿತ್ತು. ಮೃತ ಸುಧಾಳಿಗೆ 11 ತಿಂಗಳ ಮಗು ಇದ್ದು, ಅವಳ ತಂದೆ ಮನೆಯಿಂದ ಸಂಕ್ರಾಂತಿ ಹಬ್ಬಕ್ಕೆ ಪತಿ ಮನೆಗೆ ಬಂದಿದ್ದಳು. ಅಲ್ಲಿಯೇ ವಿಷ ಸೇವಿಸಿ ಸಾವನ್ನಪ್ಪಿದ್ದಳು.

ವರದಕ್ಷಿಣೆ ಕಿರುಕುಳದಿಂದ ಸುಧಾ ಸಾವನ್ನಪ್ಪಿದ್ದಾಳೆಂದು ಸಹೋದರ ಲಿಂಗೇಗೌಡ ಹನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.  ಡಿವೈಎಸ್‌ಪಿ ಎಚ್.ಆರ್. ಮಹದೇವಯ್ಯ ತನಿಖೆ ಮುಂದುವರೆಸಿ ಆರೋಪಿಗಳ ಪತ್ತೆಗೆ ತಂಡ ರಚಿಸಿ ಕೊಯಮತ್ತೂರಿನಲ್ಲಿ  ಆರೋಪಿಗಳನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT