ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕ್ರಮ್ ಸಂಪತ್‌ಗೆ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿಯು ಇದೇ ಮೊದಲ ಬಾರಿಗೆ ನೀಡುತ್ತಿರುವ ಯುವ ಪುರಸ್ಕಾರಕ್ಕೆ ನಗರದ ವಿಕ್ರಮ್ ಸಂಪತ್ ಆಯ್ಕೆಯಾಗಿದ್ದಾರೆ.

ರಾಜರ ಕಾಲದ ಆಸ್ಥಾನ ಗಾಯಕಿ ಗೌಹರ್ ಜಾನ್ ಅವರನ್ನು ಕುರಿತು ಸಂಪತ್ ಬರೆದ `ಮೈ ನೇಮ್ ಈಸ್ ಗೌಹರ್ ಜಾನ್~ ಕೃತಿಗೆ ಈ ಪುರಸ್ಕಾರ ಲಭಿಸಿದೆ.

1902ರಲ್ಲಿ ಧ್ವನಿ ಮುದ್ರಣಗೊಂಡ ಭಾರತದ ಮೊದಲ ದನಿ ಎಂಬ ಹೆಗ್ಗಳಿಕೆ ಹೊಂದಿರುವ ಗೌಹರ್ ಜಾನ್ ಅವರ ಕುರಿತಾದ ಐತಿಹಾಸಿಕ ದಾಖಲೆಗಳು ಹೆಚ್ಚಾಗಿ ಲಭ್ಯವಿರಲಿಲ್ಲ. ಸಂಪತ್ ಬಹಳ ಶ್ರಮ ವಹಿಸಿ ಶತಮಾನದ ಹಿಂದಿನ ದಾಖಲೆಗಳನ್ನು ಸಂಗ್ರಹಿಸಿ ಈ ಕೃತಿ ರಚಿಸಿದ್ದಾರೆ.
 

ಆಸ್ಥಾನ ಗಾಯಕಿಯಾಗಿದ್ದ ಕಾರಣ ಗೌಹರ್ ಜಾನ್ ಬಗ್ಗೆ ಆಗಿನ ಕಾಲದ ಮುಖ್ಯವಾಹಿನಿಯ ಸಂಗೀತಗಾರರು ಅವಜ್ಞೆ ತೋರಿದ್ದರು. ಜಾನ್ ಕುರಿತ ಕೃತಿಯು ಆ ಕಾಲದ ವಸಾಹತು ಆಳ್ವಿಕೆ, ನೈತಿಕತೆಯ ದೃಷ್ಟಿಕೋನ ಮತ್ತು ಸಾಂಸ್ಕೃತಿಕ ವಾತಾವರಣದ ಬಗ್ಗೆ ಬೆಳಕು ಚೆಲ್ಲಿದೆ.

`ದೇಶದ ಅತ್ಯುನ್ನತ ಸಾಹಿತ್ಯ ಸಂಸ್ಥೆಯು ಗುರುತಿಸಿರುವುದು ನನ್ನಲ್ಲಿ ವಿನೀತ ಭಾವವನ್ನು ಉಂಟು ಮಾಡಿದೆ. ದಾಖಲಾತಿಗಳು ಇಲ್ಲದಿದ್ದುದರಿಂದ ಕೃತಿ ರಚನೆಗೆ ತುಂಬಾ ಶ್ರಮ ಹಾಕಬೇಕಾಯಿತು~ ಎಂದು ಸಂಪತ್ ಪ್ರತಿಕ್ರಿಯೆ ನೀಡಿದ್ದಾರೆ.

ಸ್ವತಃ ಶಾಸ್ತ್ರೀಯ ಸಂಗೀತ ತರಬೇತಿ ಪಡೆದಿರುವ 32ರ ಹರೆಯದ ಸಂಪತ್, ಎಂಬಿಎ ಪದವೀಧರರಾಗಿದ್ದಾರೆ. ವೀಣಾ ವಿದ್ವಾನ್ ಎಸ್.ಬಾಲಚಂದರ್ ಕುರಿತು ಸಂಪತ್ ಕೃತಿಯೊಂದನ್ನು ರಚಿಸಿದ್ದಾರೆ. ವೀರಣ್ಣ ಮಡಿವಾಳರ ಕವನ ಸಂಕಲನ `ನೆಲದ ಕರುಣೆಯ ದನಿ~ಗೂ ಈ ಬಾರಿಯ ಯುವ ಪುರಸ್ಕಾರ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT