ಆಸ್ಥಾನ ಗಾಯಕಿಯಾಗಿದ್ದ ಕಾರಣ ಗೌಹರ್ ಜಾನ್ ಬಗ್ಗೆ ಆಗಿನ ಕಾಲದ ಮುಖ್ಯವಾಹಿನಿಯ ಸಂಗೀತಗಾರರು ಅವಜ್ಞೆ ತೋರಿದ್ದರು. ಜಾನ್ ಕುರಿತ ಕೃತಿಯು ಆ ಕಾಲದ ವಸಾಹತು ಆಳ್ವಿಕೆ, ನೈತಿಕತೆಯ ದೃಷ್ಟಿಕೋನ ಮತ್ತು ಸಾಂಸ್ಕೃತಿಕ ವಾತಾವರಣದ ಬಗ್ಗೆ ಬೆಳಕು ಚೆಲ್ಲಿದೆ.
`ದೇಶದ ಅತ್ಯುನ್ನತ ಸಾಹಿತ್ಯ ಸಂಸ್ಥೆಯು ಗುರುತಿಸಿರುವುದು ನನ್ನಲ್ಲಿ ವಿನೀತ ಭಾವವನ್ನು ಉಂಟು ಮಾಡಿದೆ. ದಾಖಲಾತಿಗಳು ಇಲ್ಲದಿದ್ದುದರಿಂದ ಕೃತಿ ರಚನೆಗೆ ತುಂಬಾ ಶ್ರಮ ಹಾಕಬೇಕಾಯಿತು~ ಎಂದು ಸಂಪತ್ ಪ್ರತಿಕ್ರಿಯೆ ನೀಡಿದ್ದಾರೆ.
ಸ್ವತಃ ಶಾಸ್ತ್ರೀಯ ಸಂಗೀತ ತರಬೇತಿ ಪಡೆದಿರುವ 32ರ ಹರೆಯದ ಸಂಪತ್, ಎಂಬಿಎ ಪದವೀಧರರಾಗಿದ್ದಾರೆ. ವೀಣಾ ವಿದ್ವಾನ್ ಎಸ್.ಬಾಲಚಂದರ್ ಕುರಿತು ಸಂಪತ್ ಕೃತಿಯೊಂದನ್ನು ರಚಿಸಿದ್ದಾರೆ. ವೀರಣ್ಣ ಮಡಿವಾಳರ ಕವನ ಸಂಕಲನ `ನೆಲದ ಕರುಣೆಯ ದನಿ~ಗೂ ಈ ಬಾರಿಯ ಯುವ ಪುರಸ್ಕಾರ ಬಂದಿದೆ.