ಬೆಂಗಳೂರು: `ಪಾಂಡುರಂಗ ವಿಷ್ಣು ಸಹಸ್ರನಾಮ ಮಂಡಲಿ ವತಿಯಿಂದ ಡಿ.22, 23ರಂದು ವೈಕುಂಠ ಏಕಾದಶಿ ಅಂಗವಾಗಿ ಮಲ್ಲೇಶ್ವರ ಆಟದ ಮೈದಾನದಲ್ಲಿ ಧಾರ್ಮಿಕ ಕಾರ್ಯ ಕ್ರಮ ಮತ್ತು ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ. ಶನಿವಾರ ರವಿಶಂಕರ್ ಗುರೂಜಿ ಅವರಿಂದ ಭಜನೆ, ಪ್ರವಚನ ಮತ್ತು ಸುದರ್ಶನ ಹೋಮ ನಡೆಯಲಿದೆ. ಪಾಂಡು ರಂಗ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದ್ದು ಕನ್ನಡಕ ವಿತರಣೆ ನಡೆಯಲಿದೆ ಎಂದು ಮಂಡಲಿಯ ಅಧ್ಯಕ್ಷ ಜಯಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.