ಸೋಲಾಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು ’ನನ್ನ ರಾಜಕೀಯ ಗುರು ಶರದ್ ಪವಾರ್ ಪ್ರಧಾನಿಯಾದರೆ ನಾನು ಸಂಭ್ರಮಿಸುತ್ತೇನೆ’ ಎಂದು ತಿಳಿಸಿದರು.
ಪವಾರ್ ಅವರು ಈ ಹಿಂದೆ ಕಾಂಗ್ರೆಸ್ನಲ್ಲಿ ಇದ್ದವರು, ವಿದೇಶಿ ಮೂಲದ ಕಾರಣಕ್ಕಾಗಿ ಪಕ್ಷ ತೊರೆದರು. ಅವರು ಯುಪಿಎ ಸರ್ಕಾರದ ಅರ್ಹ ಪ್ರಧಾನಿ ಎಂದು ಶಿಂದೆ ನುಡಿದರು.
ಮುಂಬರುವ ಕಾಂಗ್ರೆಸ್ ಸಮಾವೇಶದಲ್ಲಿ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವ ಸಾಧ್ಯತೆಗಳಿರುವ ಬೆನ್ನಲೇ ಶಿಂದೆ ಅವರ ಈ ಹೇಳಿಕೆ ಕಾಂಗ್ರೆಸ್ನಲ್ಲಿ ಹೊಸ ಸಂಚಲನ ಮೂಡಿಸಿದೆ.