ನವದೆಹಲಿ (ಐಎಎನ್ಎಸ್): ಪ್ರತಿಭಟನೆ ನಡೆಸುವುದು ನ್ಯಾಯಸಮ್ಮತ, ಆದರೆ ಹಿಂಸಾಚಾರದಿಂದ ಯಾವ ಪ್ರಯೋಜನ ಇಲ್ಲ, ಕೂಡಲೇ ಹಿಂಸಾಚಾರ ಕೈಬಿಟ್ಟು ಶಾಂತಿ ಕಾಪಾಡುವಂತೆ ಪ್ರಧಾನಿ ಮನಮೋಹನ್ ಸಿಂಗ್ ಪ್ರತಿಭಟನಾಕಾರರಲ್ಲಿ ಮನವಿ ಮಾಡಿದ್ದಾರೆ.
ದೂರದರ್ಶದಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಸಿಂಗ್ `ಅತ್ಯಾಚಾರ ಮಾಡಿದ ತಪ್ಪಿತಸ್ಥ ಆರೋಪಿಗಳಿಗೆ ಶೀಘ್ರದಲ್ಲೇ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಭರವಸೆ ನೀಡಿದರು. ಘಟನೆ ಸಂಬಂಧ ನಡೆದ ಹಿಂಸಾಚಾರಕ್ಕೆ ವಿಷಾದ ವ್ಯಕ್ತಪಡಿಸಿದರು.