ಬೆಂಗಳೂರು (ಪಿಟಿಐ): ಬಜೆಟ್ ಅಧಿವೇಶನ ಕೊನೆಗೊಳ್ಳುವವರೆಗೂ ಉಭಯ ಸದನಗಳಿಗೆ ಹಾಜರಾಗುವಂತೆ ಆಡಳಿತಾರೂಢ ಬಿಜೆಪಿ ಬುಧವಾರ ಪಕ್ಷದ ಶಾಸಕರಿಗೆ ವಿಪ್ ಜಾರಿಗೊಳಿಸಿದೆ.
ಸರ್ಕಾರ ಉರುಳಿಸುವ ಬೆದರಿಕೆಯೊಡ್ಡುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತಂತ್ರದಿಂದ ಈಗಾಗಲೇ ಹೈರಾಣಾಗಿರುವ ಬಿಜೆಪಿ ಅಧಿವೇಶನದ ಅವಧಿಯಲ್ಲಿ ಶಾಸಕರು ರಾಜೀನಾಮೆ ನೀಡದಂತೆ ತಡೆಯುವ ಹಾಗೂ ಒಗ್ಗಟ್ಟು ಪ್ರದರ್ಶಿಸುವ ನಿಟ್ಟಿನಲ್ಲಿ ವಿಪ್ ಜಾರಿಗೆ ಮುಂದಾಗಿದೆ.
`ಎಲ್ಲ ಸದಸ್ಯರಿಗೂ ವಿಪ್ ಜಾರಿಗೊಳಿಸಿದ್ದು, ಗೈರು ಇರುವ ಶಾಸಕರಿಗೆ ಶಾಸಕ ಭವನದಲ್ಲಿರುವ ಅವರ ರೂಮಿಗೆ ಕಳುಹಿಸಲಾಗಿದೆ' ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.