ನೆಲಮಂಗಲ: ಪ್ರಜ್ಞಾವಂತ ಸಧೃಡ ಪ್ರಜೆಗಳನ್ನು ರೂಪಿಸುವ ಗುರುತರವಾದ ಜವಾಬ್ಧಾರಿ ದೈಹಿಕ ಶಿಕ್ಷಕರ ಮೇಲಿದೆ ಎಂದು ವಿವೇಕಾನಂದ ಆಶ್ರಮದ ಅಧ್ಯಕ್ಷ ಡಾ.ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ಶ್ರೀನಿವಾಸ ಸಮುದಾಯ ಭವನದಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ರಾಷ್ಟ್ರಮಟ್ಟದ ವಿವಿಧ ಕ್ರೀಡೆಗಳಲ್ಲಿ ಭಾಗಿಗಳಾದ ಜಿಲ್ಲೆಯ ವಿಕಲ ಚೇತನ ಮತ್ತು ಇತರ ಕ್ರೀಡಾ ಪಟುಗಳನ್ನು ಸನ್ಮಾನಿಸಿದರು.
`ದೈಹಿಕ ಶಿಕ್ಷಣದಲ್ಲಾದ ಸ್ಥಿತ್ಯಂತರ' ಕುರಿತು ಅಧೀಕ್ಷಕ ಎಚ್.ಜಿ.ವಿರೂಪಾಕ್ಷಯ್ಯ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ `ಕ್ರೀಡಾ ಚೇತನ' ತಾಲ್ಲೂಕು ವಾರ್ಷಿಕ ಸಂಚಿಕೆಯನ್ನು ಬಿಡುಗಡೆಮಾಡಲಾಯಿತು. ಜಿಲ್ಲೆಯ ಪ್ರಾಥಮಿಕ ಹಿರಿಯ ಶಿಕ್ಷಕರನ್ನು ಸನ್ಮಾನಿಸಲಾಯಿತು.