ನವದೆಹಲಿ (ಐಎಎನ್ಎಸ್): ಕೇಂದ್ರೀಯ ವಿದ್ಯಾಲಯಗಳ ಪ್ರವೇಶ ಮಾರ್ಗದರ್ಶಿಯಲ್ಲಿ ಹೇಳಲಾದ ಮೀಸಲಾತಿಯಿಂದ ದುರ್ಬಲ ವರ್ಗದ ಮಕ್ಕಳಿಗೆ ಅನ್ಯಾಯವಾಗುತ್ತಿದೆ ಎಂದು ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್, ಮಾನವ ಸಂಪನ್ಮೂಲ ಸಚಿವಾಲಯಕ್ಕೆ ನೋಟಿಸ್ ನೀಡಿದೆ.ಈ ನೋಟಿಸ್ಗೆ ಫೆಬ್ರುವರಿ 22ರೊಳಗೆ ಉತ್ತರಿಸುವಂತೆ ನ್ಯಾಯಪೀಠ ಸೂಚಿಸಿದೆ.