ಲಖನೌ (ಐಎಎನ್ಎಸ್): ಕಳೆದ ಕೆಲ ದಿನಗಳಿಂದ ಉತ್ತರ ಪ್ರದೇಶದಲ್ಲಿ ತೀವ್ರ ಶೀತ ಗಾಳಿ ಬೀಸುತ್ತಿರುವ ಪರಿಣಾಮ ಈವರೆಗೆ ಕನಿಷ್ಟ 16 ಮಂದಿ ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ಶುಕ್ರವಾರ ಮಾಹಿತಿ ನೀಡಿದರು.
ಶೀತ ಹವಾಮಾನದಿಂದಾಗಿ ಸೊನೆಭದ್ರಾ, ಬಾರಬಂಕಿ ಮತ್ತು ಬಲ್ಲಿಯಾ, ಜಿಲ್ಲೆಗಳಲ್ಲಿ ಒಂಬತ್ತು ಮಂದಿ ಹಾಗೂ ಕುಶಿಂಗರ್, ಹತರಾಸ್ ಮತ್ತು ಮಿರ್ಜಾಪುರ ನಗರಗಳಲ್ಲಿ ಮೂರು ಜನರು ಸಾವನ್ನಪ್ಪಿರುವ ಬಗ್ಗೆ ರಾಜ್ಯ ಸರ್ಕಾರದ ಅಧಿಕಾರಿಗಳು ದೃಢಪಡಿಸಿದರು.