ಶಾಸಕರ ಸಂಬಳ 150 ರಿಂದ 200 ರೂ.
ಬೆಂಗಳೂರು, ಜುಲೈ 5 - ಪ್ರಸಕ್ತ ಅಧಿವೇಶನದಲ್ಲಿ ನಡೆಯುವ ಕಾಂಗ್ರೆಸ್ ಪಕ್ಷದ ಸಭೆ ಶಾಸಕರ ಸಂಬಳವನ್ನು 150 ರೂಪಾಯಿಗಳಿಂದ 200 ರೂಪಾಯಿಗಳಿಗೆ ಏರಿಸುವ ಪ್ರಶ್ನೆಯನ್ನು ಚರ್ಚಿಸಲಿದೆ.
ಸದ್ಯದಲ್ಲಿ ಶಾಸಕರಿಗೆ ತಿಂಗಳಿಗೆ 150 ರೂಪಾಯಿ ಸಂಬಳ ಮತ್ತು 100 ರೂಪಾಯಿ ವಿಶೇಷ ಭತ್ಯ ದೊರಕುತ್ತದೆ.
ನಗರಕ್ಕೆ ನೀರು: ರಕ್ಷಣಾ ಇಲಾಖೆ ನೆರವು?
ಬೆಂಗಳೂರು, ಜುಲೈ 5 - ರಕ್ಷಣಾ ಮಂತ್ರಿ ಶ್ರೀ ವಿ. ಕೆ. ಕೃಷ್ಣಮೆನನ್ರವರು ಇಂದು ಇಲ್ಲಿ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರೊಡನೆ ನಡೆಸಿದ ಸಂಭಾಷಣೆ ಫಲವಾಗಿ ನಗರಕ್ಕೆ ಕಾವೇರಿ ನೀರು ತರುವ ಯೋಜನೆಗೆ ರಕ್ಷಣಾ ಇಲಾಖೆ ನೆರವು ದೊರಕುವ ಸಂಭವ ಉಂಟಾಗಿದೆಯೆಂದು ತಿಳಿದುಬಂದಿದೆ.