ಬೆಂಗಳೂರು: ಗಂಧದ ಮರಗಳನ್ನು ಬೆಳೆಯುವ ನೈಸರ್ಗಿಕ ಪ್ರದೇಶಗಳ ಸಂರಕ್ಷಣೆ ಹಾಗೂ ನಿರ್ವಹಣೆಗಾಗಿ ಸಿರಿಚಂದನವನ ಕಾರ್ಯಕ್ರಮ ಜಾರಿಗೊಳಿಸಲಾಗುವುದು.
ಗಂಧದ ನೆಡುತೋಪು ಹೆಚ್ಚಿಸುವುದು ಮತ್ತು ಸಂರಕ್ಷಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಹೊಸದಾಗಿ ಘೋಷಿಸಿರುವ ಸಂರಕ್ಷಿತ ಪ್ರದೇಶ ಮತ್ತು ರಾಷ್ಟ್ರೀಯ ಉದ್ಯಾನಗಳಾದ ರಾಮದೇವರ ಬೆಟ್ಟ, ಭೀಮಘಡ ವನ್ಯಧಾಮ, ಚಿಂಚೋಳಿ ವನ್ಯಧಾಮಗಳು ಮತ್ತು ಪರಿಸರ ಸಂರಕ್ಷಣೆಗೆ ಒತ್ತು ನೀಡಲಾಗುತ್ತದೆ.
ಧಾರವಾಡ ಸಮೀಪದ ಗುಂಗರಗಟ್ಟಿಯಲ್ಲಿ ವಲಯ ಅರಣ್ಯ ಅಧಿಕಾರಿಗಳ ತರಬೇತಿ ಸಂಸ್ಥೆ ಸ್ಥಾಪನೆ.ಗ್ರಾಮ ಅರಣ್ಯ ಸಮಿತಿಗಳ ಪುನಃಶ್ಚೇತನಕ್ಕಾಗಿ ರೂ 7 ಕೋಟಿ ತೆಗೆದಿಡಲಾಗಿದೆ.