ಬೆಂಗಳೂರು ಗಾಯನ ಸಮಾಜ: 43ನೇ ಸಂಗೀತ ಸಮ್ಮೇಳನದಲ್ಲಿ ಗುರುವಾರ ಬೆಳಿಗ್ಗೆ 10ಕ್ಕೆ ಆರ್. ಎ.ರಮಾಮಣಿ ಅವರಿಂದ `ಕಲ್ಪನಾ ಸ್ವರಗಳಲ್ಲಿ ರಾಗವೈಭವ~, ಡಾ.ಕೆ.ವರದರಂಗನ್ ಅವರಿಂದ `ಕರ್ನಾಟಕ ಶಾಸ್ತ್ರಿಯ ಸಂಗೀತ- ವೈಜ್ಞಾನಿಕ ವಿಶ್ಲೇಷಣೆ~ ಕುರಿತು ಉಪನ್ಯಾಸ, ಪ್ರಾತ್ಯಕ್ಷಿಕೆ. ಸಂಜೆ 4.15ಕ್ಕೆ ಪಾವನಿ ಕಾಶಿನಾಥ್ ಗಾಯನ.
ಪಕ್ಕವಾದ್ಯದಲ್ಲಿ: ವಿಠಲ್ ರಂಗನ್ (ವಯಲಿನ್), ಡಿ.ಆರ್.ಚೇತನಮೂರ್ತಿ (ಮೃದಂಗ). ಸಂಜೆ 6ಕ್ಕೆ ಸಂಜಯ ಸುಬ್ರಹ್ಮಣ್ಯ ಅವರಿಂದ ಗಾಯನ. ಪಕ್ಕವಾದ್ಯದಲ್ಲಿ : ಎಂ.ಆರ್.ಗೋಪಿನಾಥ್ (ವಯಲಿನ್), ನೈವೇಲಿ ವೆಂಕಟೇಶ್(ಮೃದಂಗ), ತಿರುಚ್ಚಿ ಮುರಳಿ (ಘಟ).
ಶುಕ್ರವಾರ ಬೆಳಿಗ್ಗೆ 10ಕ್ಕೆ ಎಚ್.ಎಸ್ಸುಧೀಂದ್ರ ಅವರಿಂದ `ಸಂಗೀತದಲ್ಲಿ ಮೃದಂಗದ ಪಾತ್ರ~ ಮತ್ತು ಮಾನಸಿ ಪ್ರಸಾದ್ ಅವರಿಂದ `ಶಾಸ್ತ್ರೀಯ ಸಂಗೀತದಲ್ಲಿ ರಾಗಮಾಲಿಕಾ~ ಕುರಿತು ಉಪನ್ಯಾಸ, ಪ್ರಾತ್ಯಕ್ಷಿಕೆ. ಸಂಜೆ 4.15ಕ್ಕೆ ಎನ್.ಕಾರ್ತಿಕ್, ಎನ್. ಕೃತಿ, ಎಂ.ಸುಮಂತ್ ಅವರಿಂದ ವಯಲಿನ್. ಸಂಜೆ 6ಕ್ಕೆ ಪ್ರೊ.ಆರ್.ಎಸ್.ರಮಾಕಾಂತ್ ಗಾಯನ. ಪಕ್ಕವಾದ್ಯದಲ್ಲಿ: ನಾಗೈ ಶ್ರೀರಾಮ್ (ವಯಲಿನ್), ಶ್ರೀಮುಷ್ಣಂ ವಿ.ರಾಜಾರಾವ್ (ಮೃದಂಗ), ಜಿ.ಎಸ್. ರಾಮಾನುಜಂ (ಘಟ). ಸ್ಥಳ: ಕೆ.ಆರ್.ರಸ್ತೆ.