ಮೈಸೂರು: ಮೈಸೂರು ವಿಶ್ವ ವಿದ್ಯಾನಿಲಯ ಸಂಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸರಸ್ವತಿಪುರಂನಲ್ಲಿ ಗುರುವಾರ ನಡೆದಿದೆ.
ಮೂಲತಃ ದಾವಣಗೆರೆ ಜಿಲ್ಲೆ ಚನ್ನಗಿರಿಯವರಾದ, ಸರಸ್ವತಿಪುರಂ ಬಡಾವಣೆಯಲ್ಲಿ ವಾಸವಿದ್ದ ಪ್ರೊ.ಯು.ಬಿ. ಅಶೋಕ್ಕುಮಾರ್ (56) ನೇಣಿಗೆ ಶರಣಾದವರು. ಕುಟುಂಬ ಸಮೇತರಾಗಿ ಅಶೋಕ್ಕುಮಾರ್ ಬುಧವಾರ ಹಾಸನಕ್ಕೆ ತೆರಳಿದ್ದರು. ಪತ್ನಿ ಚಲುವಾಂಬಿಕಾ ಹಾಗೂ ಇಬ್ಬರು ಪುತ್ರಿಯರು ಹಾಸನದಲ್ಲೇ ಉಳಿದರೆ ಅಶೋಕ್ಕುಮಾರ್ ಬುಧವಾರ ರಾತ್ರಿಯೇ ನಗರಕ್ಕೆ ವಾಪಸ್ ಆಗಿದ್ದರು.
ಪತ್ನಿ ಮತ್ತು ಇಬ್ಬರು ಪುತ್ರಿಯರು ಮದುವೆ ಮುಗಿಸಿ ಗುರುವಾರ ಬೆಳಿಗ್ಗೆ 8.30ರ ಸುಮಾರಿಗೆ ಮನೆಗೆ ಬಂದಾಗ ಅಶೋಕ್ ಕುಮಾರ್ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂತು.
ರಾಷ್ಟ್ರಪತಿಗೆ ಪತ್ರ: ಅಶೋಕ್ಕುಮಾರ್ ಆತ್ಮಹತ್ಯೆಗೂ ಮುನ್ನ ಎರಡು ಪತ್ರಗಳನ್ನು ಬರೆದಿಟ್ಟಿದ್ದಾರೆ. ರಾಷ್ಟ್ರಪತಿಗೆ ಬರೆದಿರುವ ಪತ್ರದಲ್ಲಿ `ವಿಶ್ವವಿದ್ಯಾನಿಲಯದಲ್ಲಿ ಕುಲಪತಿ ಆಗಲು ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗುತ್ತದೆ. ವ್ಯವಸ್ಥೆ ಹದಗೆಟ್ಟಿದೆ.