ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತಾನ ಭಾಗ್ಯ ನೆಪದಲ್ಲಿ ಮೋಸ: ಪೂಜಾರಿ ಬಂಧನ

Last Updated 24 ಡಿಸೆಂಬರ್ 2013, 6:14 IST
ಅಕ್ಷರ ಗಾತ್ರ

ರಾಯಚೂರು: ಮಹಿಳೆಯರಿಗೆ ಸಂತಾನ ಭಾಗ್ಯಕ್ಕಾಗಿ ಮಕ್ಕಳಾಗುವ ಪೂಜೆ ಮಾಡುವುದಾಗಿ ನಂಬಿಸಿ ಮಹಿಳೆಯರನ್ನು ಲೈಂಗಿಕವಾಗಿ ಬಳಸುತ್ತಿದ್ದ ದೇವದುರ್ಗದ ಬೆಟ್ಟದ ಹತ್ತಿರದ ಶಂಭುಲಿಂಗ ದೇವಸ್ಥಾನದ ಪೂಜಾರಿ ವೀರೇಶ ಸೂಗರಯ್ಯ­ಸ್ವಾಮಿ ಅವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾ­ಧಿಕಾರಿ ಎಂ.ಎನ್‌ ನಾಗರಾಜ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿ­ಯಲ್ಲಿ ಮಾತನಾಡಿ, ಆರೋಪಿ­ಯನ್ನು ಆಂಧ್ರಪ್ರದೇಶದ ಮಕ್ತಲ್‌ ತಾಲ್ಲೂ­ಕಿನ ಚಿಂತಲಕುಂಟಾ ಗ್ರಾಮ­ದಲ್ಲಿ ಭಾನುವಾರ ಬಂಧಿಸಲಾ­ಗಿದೆ. ಆರೋಪಿ  ಬಂಧನಕ್ಕೆ ದೇವ­ದುರ್ಗ ಸಿಪಿಐ ರಮೇಶ ಸಿ.ಮೇಟಿ, ಪಿಎಸ್‌ಐ ಬಸವರಾಜ ಪುಲ್ಹಾರಿ, ರವಿ, ಪುರುಷೋತ್ತಮ ಹಾಗೂ ಸಂಚಾರಿ ಪೊಲೀಸ್‌ ಠಾಣೆಯ ಸಿಬ್ಬಂದಿ ರಾಮಣ್ಣ, ದೇವಪ್ಪ, ವಿಶ್ವನಾಥರೆಡ್ಡಿ, ಹನುಮಂತರಾಯ, ಮರಿಸ್ವಾಮಿ ಅವರನ್ನೊಳಗೊಂಡ ತಂಡ  ರಚನೆ ಮಾಡಲಾಗಿತ್ತು ಎಂದು ತಿಳಿಸಿದರು.

ಈ ತಂಡದ ಸದಸ್ಯರು ಕ್ಷೀಪ್ರ ಕಾರ್ಯಾಚರಣೆ ನಡೆಸಿ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನಿಬ್ಬರು ಆರೋಪಿ ಬಸವ ಅಲಿಯಾಸ್‌ ಬಸವರಾಜ ಸಿಂಧ­ನೂರು ಮತ್ತು ನಾಗರಾಜ ಕುಂಬಾರ ತಲೆ ಮರೆಸಿಕೊಂಡಿದ್ದುಬಂಧಿಸಲಾ­ಗುವುದು ಎಂದು ಹೇಳಿದರು.

ಮಟ್ಕಾ ಜೂಜಾಟ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಸಿರವಾರ ಪಟ್ಟಣದ ನಕಲಿ ಇ– ಸ್ಟಾಂಪಿಂಗ್‌ ಸಂಬಂಧಿಸಿದಂತೆ ಆರೋಪಿ ಬಂಧಿಸಲು ಕ್ರಮ ತೆಗೆದುಕೊಳ್ಳ­ಲಾಗಿದೆ ಎಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿ­ಕಾರಿ ಅಶೋಕ ಸದಲಗಿ,  ಸಿಪಿಐ ರಮೇಶ, ಮೇಟಿ,  ಸಿಪಿಐ ಚಂದ್ರಶೇ­ಖರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT