ಬಣ್ಣಗಳ ಭಾವದೋಕುಳಿ ಅಲ್ಲಿ ಮನೆ ಮಾಡಿತ್ತು. ಬಗೆಬಗೆಯ ಚಿತ್ರಗಳು ಕ್ಯಾನ್ವಾಸ್ ಮೇಲೆ ಮೂಡಿದ್ದವು. ಇತ್ತೀಚೆಗೆ ಅಗಲಿದ ರಾಷ್ಟ್ರಕವಿ ಜಿಎಸ್ಎಸ್, ರಾಜವಂಶಸ್ಥ ಒಡೆಯರ್ ಅವರ ಭಾವಚಿತ್ರವನ್ನು ಮಕ್ಕಳು ತಮ್ಮ ಮುಖದ ಮೇಲೆ ರಚಿಸಿ ಗಮನ ಸೆಳೆದರು.
ಚಿತ್ರಸಂತೆಗಾಗಿ ಕಾಯುತ್ತಿದ್ದ ಬೆಂಗಳೂರಿಗರ ಜತೆಗೆ ವಿದೇಶಿಯರೂ ಒಂದಷ್ಟು ಖರೀದಿ ಮಾಡಿ ಪುಳಕಿತಗೊಂಡರು. ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕಾ ಬಳಗ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಮಕ್ಕಳು ಕಲಾಕೃತಿ ರಚನೆಯಲ್ಲಿ ತಲ್ಲೀನರಾಗಿದ್ದರು. ವಾರ್ಷಿಕ ಕಲಾಜಾತ್ರೆಯಲ್ಲಿ ಕಂಡ ಹಲವು ದೃಶ್ಯಗಳನ್ನು ಛಾಯಾಗ್ರಾಹಕ ರಂಜು ಪಿ. ಸೆರೆಹಿಡಿದಿದ್ದಾರೆ.