ನವದೆಹಲಿ: ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕೆಚ್ಚನ್ನು ತೋರದ ಸಂಪುಟ ವಿಸ್ತರಣೆ ಒಂದು ವಿಫಲ ಪ್ರಯತ್ನ ಎಂದು ಬಿಜೆಪಿ ಟೀಕಿಸಿದೆ.‘ಈಗ ವಿಸ್ತರಣೆಯಾಗಿರುವ ಸಚಿವ ಸಂಪುಟದ ಪ್ರಯತ್ನವನ್ನು ನೋಡಿದರೆ ಪ್ರಧಾನಿ ಅವರು ತಮ್ಮ ಮೇಲಿರುವ ಒತ್ತಡದಿಂದ ನಿವೃತ್ತರಾದಂತೆ ತೋರುವುದಿಲ್ಲ’ ಎಂದು ಬಿಜೆಪಿ ವಕ್ತಾರ ಶಾನವಾಜ್ ಹುಸೇನ್ ಬುಧವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದರಿಂದ ಸರ್ಕಾರ ಯಾವುದೇ ರಾಜಕೀಯ ಸಂದೇಶವನ್ನು ನೀಡಿಲ್ಲ ಎಂದು ಆಪಾದಿಸಿದ ಅವರು, ಭ್ರಷ್ಟಾಚಾರದ ಆಪಾದನೆ ಹೊತ್ತಿರುವ ಕೆಲವು ಸಚಿವರ ಖಾತೆಯನ್ನಷ್ಟೆ ಪ್ರಧಾನಿಯವರು ಬದಲಾಯಿಸಿದ್ದಾರೆ ಎಂದಿದ್ದಾರೆ.