* ನಮ್ಮಲ್ಲಿ ಪ್ರಾಣಕ್ಕೆ ಪ್ರಾಣ ಕೊಡುವ ಅಧಿಕಾರಿಗಳೂ ಇದ್ದಾರೆ. ಅದೇ ರೀತಿ, ಮಾಜಿ ಸಿಎಂಗೆ ದಾಖಲೆ ತಲುಪಿಸುವ ಅಧಿಕಾರಿಗಳೂ ಇದ್ದಾರೆ.
-ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ
* ಕುಡಿತವೇ ಒಂದು ಸಾಮಾಜಿಕ ಸಮಸ್ಯೆಯಾಗಿರುವಾಗ ಮದ್ಯದಂಗಡಿ ತೆರವುಗೊಳಿಸುವುದರಿಂದ ಹೇಗೆ ಸಾಮಾಜಿಕ ಸಮಸ್ಯೆ ಉಂಟಾಗುತ್ತದೆ.
-ಕ್ಯಾ.ಗಣೇಶ್ ಕಾರ್ಣಿಕ್, ವಿಧಾನ ಪರಿಷತ್ ಸದಸ್ಯ
* ಒಂದಿಬ್ಬರು ಎಂಜಿನಿಯರ್ಗಳ ಸೊಂಟ ಮುರಿದರೆ (ಅವೈಜ್ಞಾನಿಕ ರಸ್ತೆ ಉಬ್ಬುಗಳ ಬಗ್ಗೆ ಪ್ರಸ್ತಾಪಿಸಿ) ಎಲ್ಲವೂ ಸರಿ ಹೋಗುತ್ತದೆ.
- ಡಿ.ಎಚ್. ಶಂಕರಮೂರ್ತಿ, ವಿಧಾನ ಪರಿಷತ್ನ ಸಭಾಪತಿ
* ಸರ್ಕಾರ ನಿರ್ಮಿಸಿಕೊಡುವ ಮನೆಗಳು ನೆರವಿನ ಮನೆಗಳಾಗಬೇಕೇ ಹೊರತು ಸಾವಿನ ಮನೆಗಳಾಗಬಾರದು.
- ಎಚ್.ಎಸ್.ಶಂಕರಲಿಂಗೇಗೌಡ
* ಮತದಾನದ ಹಕ್ಕು ಇರುವ ಎಲ್ಲರಿಗೂ ನಿವೇಶನ ನೀಡಬೇಕು.
- ಎಂ.ಪಿ.ಕುಮಾರಸ್ವಾಮಿ