ಮೇಷ್ಟ್ರು ಹೇಳಿದ ನೆನಪುಗಳು
ಆತ್ಮೀಯ ಶಿಕ್ಷಕ ಗೆಳೆಯನೊಬ್ಬನಿಗೆ ಕುಡಿಯಬೇಡ ಎಂದು ಪದೇ ಪದೇ ಹೇಳಿದೆ. ಆತ, ಏಕೆ ಕುಡಿಯಬಾರದು? ನೀನೂ ಕುಡಿ ಎಂದು ಹೇಳಿದ. ಅತ್ಯಂತ ಬುದ್ಧಿವಂತ, ಪ್ರತಿಭಾವಂತನಿಗೆ ನನ್ನ ಮಾತು ಪ್ರಯೋಜನವಾಗಲಿಲ್ಲ. ಕೊನೆಗೆ ಒಂದು ದಿನ ಕುಡಿತದಿಂದಲೇ ಅಪಘಾತಗೊಂಡು ಮೃತಪಟ್ಟಅವನ ಮಕ್ಕಳೂ ಅದೇ ಹಾದಿ ಅನುಸರಿಸಿದ್ದಾರೆ.
ಬಹಳ ಬೇಸರವೆನಿಸುತ್ತದೆ.ಶಿಕ್ಷಕರು ರಾಜಕೀಯ ಮಾಡುವುದು, ಕುಡಿತದ ದಾಸರಾಗಿರುವುದು ನೋಡಿದಾಗ ಮುಂದೆ ಎಂಥ ಪ್ರಜೆಗಳು ನಿರ್ಮಾಣವಾದಾರು ಎಂಬ ಆತಂಕ ಕಾಡುತ್ತಿದೆ ಎಂದರು ಸವದತ್ತಿ.