ಬೆಂಗಳೂರು: `ತಂಡ ಸಂಕಷ್ಟದಲ್ಲಿದೆ ಎನ್ನುವುದು ತಿಳಿದ ವಿಷಯ. ಈ ಸಂದರ್ಭದಲ್ಲಿ ಮಹತ್ವದ ಜವಾಬ್ದಾರಿ ಲಭಿಸಿದೆ. ಎಲ್ಲಾ ಸವಾಲನ್ನು ಸಮರ್ಥವಾಗಿ ಎದುರಿಸುತ್ತೇನೆ...~
-ಹೀಗೆ ಹೇಳಿದ್ದು ಎಚ್ಎಎಲ್ ಫುಟ್ಬಾಲ್ ತಂಡದ ನೂತನ ತಾಂತ್ರಿಕ ಮ್ಯಾನೇಜರ್ ಚಂದ್ರಶೇಖರ್. `ಚಾಮರಾಜಪೇಟೆ ಚಂದ್ರು~ ಎಂದೇ ಖ್ಯಾತಿಯಾಗಿರುವ ಅವರು `ಪ್ರಜಾವಾಣಿ~ ಯೊಂದಿಗೆ ಮಾತನಾಡಿದರು.
`ವಿದೇಶಿ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವುದು ನಮ್ಮ ಮುಂದಿರುವ ಮೊದಲ ಯೋಚನೆ. ಸ್ಥಳೀಯ ಆಟಗಾರರ ಆಟದ ನೈಪುಣ್ಯತೆಯನ್ನು ಹೆಚ್ಚಿಸುವುದರ ಜೊತೆಗೆ ಜೀವನ ಭದ್ರತೆಯ ಬಗ್ಗೆಯೂ ಕಾಳಜಿ ವಹಿಸುತ್ತೇವೆ~ ಎಂದು ಅವರು ಹೇಳಿದರು.
`ಆಟಗಾರರ ಆಯ್ಕೆಯಲ್ಲಿ ಪಾರದರ್ಶಕತೆ ಅನುಸರಿಸುತ್ತೇವೆ. ಇಲ್ಲವಾದರೆ, ಬಲಿಷ್ಠ ತಂಡ ಕಟ್ಟಲು ಸಾಧ್ಯವಾಗುವುದಿಲ್ಲ. ಕಳಪೆ ಪ್ರದರ್ಶನದಿಂದ ಟೀಕೆಗೆ ಗುರಿಯಾಗಿರುವ ಎಚ್ಎಎಲ್ ಉತ್ತಮ ಪ್ರದರ್ಶನ ನೀಡಲು ಕೆಲ ಕಾಲ ಬೇಕಾಗುತ್ತದೆ. ತಂಡದಲ್ಲಿ ಶೇ. 80ರಷ್ಟು ಬದಲಾವಣೆ ಅಗತ್ಯವಿದೆ~ ಎಂದು ಚಂದ್ರಶೇಖರ್ ಅಭಿಪ್ರಾಯ ಪಟ್ಟಿದ್ದಾರೆ.
ಎಚ್ಎಎಲ್ ತಂಡಕ್ಕೆ ಚಂದ್ರಶೇಖರ್ ನೇಮಕ |
ಈ ಸಲದ ಐ ಲೀಗ್ ಟೂರ್ನಿಯಲ್ಲಿ ಎಚ್ಎಎಲ್ ಕಳಪೆ ಪ್ರದರ್ಶನ ನೀಡಿ ಎರಡನೇ ಡಿವಿಷನ್ಗೆ ಹಿಂಬಡ್ತಿ ಪಡೆದಿದೆ. ಅಷ್ಟೇ ಅಲ್ಲ, ಐ ಲೀಗ್ನಲ್ಲಿ ಒಟ್ಟು 26 ಪಂದ್ಯಗಳನ್ನು ಆಡಿ ಕೇವಲ ಎರಡರಲ್ಲಿ ಮಾತ್ರ ಗೆಲುವು ಗಳಿಸಿದೆ. ಆದ್ದರಿಂದ ಫುಟ್ಬಾಲ್ ಆಟಗಾರರು ಹಾಗೂ ಕ್ರೀಡಾ ಪ್ರೇಮಿಗಳಿಂದ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಆದ್ದರಿಂದ ಎಚ್ಎಎಲ್ ಆಡಳಿತ ಮಂಡಳಿ ಈ ಬದಲಾವಣೆ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.