ಬೆಂಗಳೂರು: ನಗರದ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕಿನ 12ನೇ ಶಾಖೆಯನ್ನು ಬನ್ನೇರುಘಟ್ಟ ಮುಖ್ಯ ರಸ್ತೆಯ ಗೊಟ್ಟಿಗೆರೆಯಲ್ಲಿ ಇತ್ತೀಚೆಗೆ ರಾಮಕೃಷ್ಣಮಠದ ಹರ್ಷಾನಂದಜಿ ಮಹಾರಾಜ್ ಸ್ವಾಮೀಜಿ ಉದ್ಘಾಟಿಸಿದರು.
ಹರ್ಷಾನಂದಜಿ ಮಹಾರಾಜ್ ಸ್ವಾಮೀಜಿ ಮಾತನಾಡಿದ ಅವರು` ಬಲಿಷ್ಠ ರಾಷ್ಟ್ರ ನಿರ್ಮಾಣವಾಗಬೇಕಾದರೆ ಸೇವೆಯಲ್ಲಿ ಪ್ರಾಮಾಣಿಕತೆ ಮತ್ತು ತ್ಯಾಗದ ಮನೋಭಾವ ಹೆಚ್ಚು ಇರಬೇಕು. ಪ್ರತಿಯೊಬ್ಬರೂ ಸಮಾಜ ಸೇವೆಗೆ ಒತ್ತು ನೀಡಬೇಕೇ ಹೊರತು, ಹಣದ ಬೆನ್ನು ಹತ್ತಿ ಹೋಗಬಾರದು' ಎಂದು ಕಿವಿಮಾತು ಹೇಳಿದರು.
ಬ್ಯಾಂಕಿನ ಅಧ್ಯಕ್ಷ ಸುಂದರೇಗೌಡ ಮಾತನಾಡಿ, `2011-12ನೇ ಸಾಲಿನಲ್ಲಿ ಬ್ಯಾಂಕ್ 4,500 ಕೋಟಿ ರೂಪಾಯಿ ವಹಿವಾಟು ನಡೆಸಿದೆ' ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಎಂ.ಕೃಷ್ಣಪ್ಪ, ಬ್ಯಾಂಕಿನ ಉಪಾಧ್ಯಕ್ಷ ವಿ.ಎನ್. ವೀರನಾಗಪ್ಪ, ಸಹಕಾರ ಸಂಘಗಳ ನಿವೃತ್ತ ಹೆಚ್ಚುವರಿ ನಿಬಂಧಕ ಗೋವಿಂದರಾವ್ ಕುರ್ಡೇಕರ್ ಉಪಸ್ಥಿತರಿದ್ದರು.