ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಪಠ್ಯ ಚಟುವಟಿಕೆ: ವಿಜೇತ ಶಿಕ್ಷಕರು

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ವಿಜಾಪುರ: ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ ವಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯವರು ಬಿ.ಎಲ್.ಡಿ.ಇ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರಿಗೆ ಬುಧವಾರ ಇಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಸಹಪಠ್ಯ ಚಟುವಟಿಕೆ ಸ್ಪರ್ಧೆಯ ಫಲಿತಾಂಶ ಈ ಕೆಳಗಿನಂತಿದೆ.

ಸ್ಥಳದಲ್ಲೇ ಪಾಠೋಪಕರಣ ತಯಾರಿಕೆ: ಪ್ರಾಥಮಿಕ ವಿಭಾಗ-ತುಮಕೂರು ಜಿಲ್ಲೆಯ ಎಲ್. ಕಾಂತರಾಜು (ಪ್ರಥಮ), ಮಂಡ್ಯದ ಟಿ.ಆರ್. ರವಿಶಂಕರ (ದ್ವಿತೀಯ), ಬಾಗಲಕೋಟೆಯ ಎಚ್.ಜಿ. ಬಿರಾದಾರ (ತೃತೀಯ). ಪ್ರೌಢಶಾಲಾ ವಿಭಾಗ- ದಕ್ಷಿಣ ಕನ್ನಡ ಜಿಲ್ಲೆಯ ವಾಸುದೇವ ರಾವ್ (ಪ್ರಥಮ), ಬೀದರ್‌ನ ಖಲೀಲ್ ಅಹ್ಮದ್ (ದ್ವಿತೀಯ), ಚಿಕ್ಕಮಗಳೂರು ಜಿಲ್ಲೆ ಕೆ.ಆರ್. ಪ್ರಭಾಕರ್ (ತೃತೀಯ).

ಚಿತ್ರ ಕಲೆ: ಪ್ರಾಥಮಿಕ ವಿಭಾಗ- ಚಾಮರಾಜನಗರದ ದುಂಡ ಮಹದೇವಸ್ವಾಮಿ (ಪ್ರಥಮ), ಬಳ್ಳಾರಿಯ ಜಿ. ಮಂಜುನಾಥ (ದ್ವಿತೀಯ), ಮೈಸೂರಿನ ಎಚ್.ಎಲ್. ಸೋಮಶೇಖರ (ತೃತೀಯ). ಪ್ರೌಢಶಾಲಾ ವಿಭಾಗ- ಮಂಡ್ಯದ ನರಸಿಂಹಾಚಾರ್ಯ (ಪ್ರಥಮ), ಉತ್ತರ ಕನ್ನಡ ಜಿಲ್ಲೆಯ ಡಿ.ಎಲ್. ಬಡಿಗೇರ (ದ್ವಿತೀಯ), ಉಡುಪಿ ಜಿಲ್ಲೆಯ ಕಮಲ್ ಅಹ್ಮದ್(ತೃತೀಯ).

ಪ್ರಬಂಧ ಸ್ಪರ್ಧೆ: ಪ್ರಾಥಮಿಕ ವಿಭಾಗ- ಬಳ್ಳಾರಿ ಜಿಲ್ಲೆಯ ಎಂ. ಗೋಣಿಬಸಪ್ಪ (ಪ್ರಥಮ), ಚಾಮರಾಜನಗರ ಜಿಲ್ಲೆಯ ವಿ.ಮಂಜುಳಾ (ದ್ವಿತೀಯ), ತುಮಕೂರು ಜಿಲ್ಲೆಯ ಆರತಿ ದೇವರಾಜು ಶೆಟ್ಟಿ (ತೃತೀಯ). ಪ್ರೌಢಶಾಲಾ ವಿಭಾಗ- ಬಾಗಲಕೋಟೆ ಜಿಲ್ಲೆಯ ಡಿ.ವಿ. ಹಿರೇಮಠ (ಪ್ರಥಮ), ತುಮಕೂರು ಜಿಲ್ಲೆಯ ಹನುಮಂತರಾಯಪ್ಪ (ದ್ವಿತೀಯ), ಧಾರವಾಡದ ಎಸ್.ಎಂ. ಅಂಕಲಿ (ತೃತೀಯ).

ಆಶು ಭಾಷಣ: ಪ್ರಾಥಮಿಕ ವಿಭಾಗ- ಮೈಸೂರು ಜಿಲ್ಲೆಯ ವಿ.ಎಂ. ಸುಧಾ (ಪ್ರಥಮ), ದಾವಣಗೆರೆ ಜಿಲ್ಲೆಯ ಕೆ.ಎಸ್. ರವಿಕುಮಾರ (ದ್ವಿತೀಯ), ವಿಜಾಪುರ ಜಿಲ್ಲೆಯ ಎ.ಎಫ್. ಅರಳಿಮಟ್ಟಿ (ತೃತೀಯ). ಪ್ರೌಢ ಶಾಲಾ ವಿಭಾಗ- ಧಾರವಾಡ ಜಿಲ್ಲೆಯ ಎಸ್.ವಿ. ಬಂಗಾರಿಮಠ (ಪ್ರಥಮ), ವಿಜಾಪುರ ಜಿಲ್ಲೆಯ ಎಂ.ಎಫ್. ಅರಳಿಮಟ್ಟಿ (ದ್ವಿತೀಯ), ಮಂಡ್ಯ ಜಿಲ್ಲೆಯ ಯೋಗೇಶ ಎಂ.ಡಿ. (ತೃತೀಯ).

ಕಾವ್ಯ ಗಾಯನ ಸ್ಪರ್ಧೆ: ಪ್ರಾಥಮಿಕ ವಿಭಾಗ- ಕೊಪ್ಪಳ ಜಿಲ್ಲೆಯ ಪಲ್ಲವಿ ಆರ್. (ಪ್ರಥಮ), ಹಾಸನ ಜಿಲ್ಲೆಯ ನಾಗಮಣಿ ಎನ್.ಎಸ್. (ದ್ವಿತೀಯ), ಕೊಡಗು ಜಿಲ್ಲೆಯ ಶ್ರೀನಿವಾಸ (ತೃತೀಯ). ಪ್ರೌಢಶಾಲಾ ವಿಭಾಗ- ಉತ್ತರ ಕನ್ನಡ ಜಿಲ್ಲೆಯ ಭಾರತಿ ಆರ್. ಹೆಗಡೆ (ಪ್ರಥಮ), ರಾಮನಗರ ಜಿಲ್ಲೆಯ ಸಿದ್ಧರಾಮ ಎಸ್. ಕೇಸಾಪುರ (ದ್ವಿತೀಯ), ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎ.ಬಿ. ಹೊನವಾಡ (ತೃತೀಯ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT