ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ಮುನ್ನೋಟ- ಸೆ.6,7

Last Updated 5 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಸೆಪ್ಟೆಂಬರ್ 6, ಮಂಗಳವಾರ
ಪ್ರತಿಭಾನ್ವೇಷಣೆ

ಸರ್ಕಾರಿ ಆರ್.ಸಿ. ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು: `ಸೃಜನ ಸಂಸ್ಕೃತಿ~ ಸಾಂಸ್ಕೃತಿಕ ವೇದಿಕೆಯಿಂದ ಪ್ರತಿಭಾನ್ವೇಷಣೆ-2011. ಉದ್ಘಾಟನೆ: ಡಾ.ವಿ.ಎಸ್. ಆಚಾರ್ಯ. ಅತಿಥಿಗಳು: ಆರ್.ರೋಷನ್ ಬೇಗ್. ಅಧ್ಯಕ್ಷತೆ: ಡಾ.ವೇಣುಗೋಪಾಲ್. ಸ್ಥಳ: ಅರಮನೆ  ರಸ್ತೆ. ಬೆಳಿಗ್ಗೆ 11.

ರಾಮಾಯಣ
ನಂಜನಗೂಡು ರಾಘವೇಂದ್ರಸ್ವಾಮಿಗಳ ಮಠ: ವಿದ್ವಾನ್ ರವಿ ಆಚಾರ್ಯ ಅವರಿಂದ `ರಾಮಾಯಣ~ ಪ್ರವಚನ. ಸ್ಥಳ: ಪ್ಲಾಟ್‌ಫಾರಂ ರಸ್ತೆ, ಶೇಷಾದ್ರಿಪುರಂ. ಸಂಜೆ 6.30.

ಷಡ್ದರ್ಶನ
ಧ್ಯಾನ ಮತ್ತು ವ್ಯಾಸಂಗ ವೃತ್ತ: ಡಾ.ಶ್ರೀರಾಮ ಭಟ್ ಅವರಿಂದ `ಷಡ್ದರ್ಶನಗಳು~ ಕುರಿತು ಉಪನ್ಯಾಸ. ಸ್ಥಳ: ಎಸ್‌ಎಸ್‌ಎಂಆರ್‌ವಿ ಪಿಯು ಕಾಲೇಜು, ಜಯನಗರ ಟಿ ಬ್ಲಾಕ್. ಸಂಜೆ 6.30.

ಡ್ರಮಾಟಿಕ್ ಹಿಸ್ಟರಿ
ಕರ್ನಾಟಕ ನಾಟಕ ಅಕಾಡೆಮಿ: ಸಚಿವ ಗೋವಿಂದ ಎಂ.ಕಾರಜೋಳ ಅವರಿಂದ ಮುದೇನೂರು ಸಂಗಣ್ಣ ಅವರ `ದಿ ಡ್ರಮಾಟಿಕ್ ಹಿಸ್ಟರಿ ಆಫ್ ದ ವರ್ಲ್ಡ್~ ಕೃತಿಯ ಲೋಕಾರ್ಪಣೆ. ಕೃತಿಯ ಬಗ್ಗೆ: ಡಾ.ಗಜಾನನ ಶರ್ಮಾ. ನಂತರ ಕಲಾಮೈತ್ರಿ ಸಾಂಸ್ಕೃತಿಕ ವೇದಿಕೆಯಿಂದ `ಪಂಥ~ ನಾಟಕದ ಏಕವ್ಯಕ್ತಿಯ ಪ್ರದರ್ಶನ (ಮೂಲಕಥೆ: ಆ್ಯಂಟನಿ ಚೆಕಾವ್. ರಂಗರೂಪ, ನಿರ್ದೇಶನ: ಕೆ.ಆರ್.ಎಸ್.ಶರ್ಮಾ). ಅಧ್ಯಕ್ಷತೆ: ಡಾ.ಬಿ.ವಿ.ರಾಜಾರಾಂ. ಸ್ಥಳ: ಕನ್ನಡ ಭವನ, ಜೆ.ಸಿ.ರಸ್ತೆ. ಸಂಜೆ 6.

ಬ್ರಹ್ಮಸೂತ್ರ ಭಾಷ್ಯ
ಅಖಿಲ ಭಾರತ ಮಾಧ್ವ ಮಹಾ ಮಂಡಲ ಪಬ್ಲಿಕೇಷನ್ ಟ್ರಸ್ಟ್: ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥರಿಂದ ಆನಂದ ತೀರ್ಥ ವಿರಚಿತ `ಸರ್ವ ಮೂಲ ಗ್ರಂಥ ಬ್ರಹ್ಮಸೂತ್ರ ಭಾಷ್ಯ (ಭಾಗ-2 ಅಧ್ಯಾಯ-2. ಕನ್ನಡ ಅನುವಾದ: ಎ.ಹರಿದಾಸ ಭಟ್ಟ) ಕೃತಿಯ ಲೋಕಾರ್ಪಣೆ. ಸ್ಥಳ: ಪೂರ್ಣಪ್ರಜ್ಞ ವಿದ್ಯಾಪೀಠ, ಕತ್ತರಿಗುಪ್ಪೆ ಮುಖ್ಯ ರಸ್ತೆ. ಸಂಜೆ 6.30.
 
ಸೆಪ್ಟೆಂಬರ್ 7, ಬುಧವಾರ

ಪ್ರವಚನ

ಬಸವ ಕೇಂದ್ರ: ವೀರಶೈವ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಶರಣ ಸಂಗಮ. ಅರಿವಿನ ಅಂಗಳ ಮಾಸಿಕ ಕಾರ್ಯಕ್ರಮದಲ್ಲಿ `ಶೂನ್ಯ (ತತ್ತ್ವ)ದ ಪ್ರತಿಪಾದನೆಯ ಕುರಿತು ಪ್ರವಚನ. ಸಾನ್ನಿಧ್ಯ: ಡಾ.ಶಿವಮೂರ್ತಿ ಮುರುಘಾ ಶರಣರು. ಅತಿಥಿಗಳು: ವಿ.ಸೋಮಣ್ಣ, ಎಂ.ಪಿ.ರೇಣುಕಾಚಾರ್ಯ, ಮುರುಗೇಶ್ ಆರ್.ನಿರಾಣಿ. ಸ್ಥಳ: ಜೈನ್ ತೇರಾಪಂಥ ಭವನ, 2ನೇ ಮುಖ್ಯ ರಸ್ತೆ, ಗಾಂಧಿನಗರ. ಸಂಜೆ 5.30.

ಭಕ್ತಿ ಗೀತೆಗಳ
ದಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ಸಿ. ಮಾಧುರಿ ಅವರಿಂದ ಭಕ್ತಿ ಗೀತೆಗಳ ಗಾಯನ. ಸ್ಥಳ:ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ. ಸಂಜೆ 6.

ಜಗನ್ನಾಥ ವಿಜಯ
ಗಾಂಧಿ ಸಾಹಿತ್ಯ ಸಂಘ: ಪ್ರೊ. ಶ್ರೀನಿವಾಸ ಶರ್ಮಾ ಅವರಿಂದ `ರುದ್ರಭಟ್ಟನ ಜಗನ್ನಾಥ ವಿಜಯದಲ್ಲಿ~ ಕುರಿತು ಉಪನ್ಯಾಸ. ಸ್ಥಳ: 8ನೇ ಕ್ರಾಸ್, ಮಲ್ಲೇಶ್ವರ. ಸಂಜೆ 6.

ಇಂದು ಮತ್ತು ನಾಳೆ

ಪ್ರೋಷ್ಠಪದಿ ಭಾಗವತ

ಶ್ರೀ ಮದಾನಂದತೀರ್ಥ ಪ್ರವಚನ  ಸಮಿತಿ: ಹೊಳವನಹಳ್ಳಿ ಶ್ರೀನಿವಾಸಾಚಾರ್ಯ ಅವರಿಂದ `ಪ್ರೋಷ್ಠಪದಿ ಭಾಗವತ~ ಪ್ರವಚನ. ಸ್ಥಳ: ರಾಘವೇಂದ್ರ ಸ್ವಾಮಿ ಮಠ, 6ನೇ ಅಡ್ಡ ರಸ್ತೆ, ಅಮರಜ್ಯೋತಿ ನಗರ. ಸಂಜೆ 7.

ಪ್ರವಚನ
ರಾಗೀಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್: ಮಂಗಳವಾರ ಮಂಜುನಾಥ್ ಭಟ್ ವಿನಾಯಕ ಅವರಿಂದ `ವೇದಾಂತ ಪರಿಭಾಷೆಗಳು ಮತ್ತು ಪರಿಚ್ಛೇದಗಳು~ ಪ್ರವಚನ. ಬುಧವಾರ ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳಿಂದ ಪ್ರವಚನ. ಸ್ಥಳ: 9ನೇ ಬ್ಲಾಕ್, ಜಯನಗರ. ನಿತ್ಯ ಸಂಜೆ 6.30.

ದಶಲಕ್ಷಣ ಮಹಾಪರ್ವ
ಚಕ್ರೇಶ್ವರಿ ಮಹಿಳಾ ಸಮಾಜ: ದಶಲಕ್ಷಣ ಮಹಾಪರ್ವ ಪ್ರವಚನದಲ್ಲಿ ಮಂಗಳವಾರ ಜ್ವಾಲಿನಿ ಮಹಾವೀರ್ ಅವರಿಂದ `ಉತ್ತಮ ಸತ್ಯಧರ್ಮ~ ಪ್ರವಚನ. ಬುಧವಾರ ಭಾರತಿ ಮಹಾಬಲಯ್ಯ ಅವರಿಂದ `ಉತ್ತಮ ಸಂಯಮಧರ್ಮ~ ಪ್ರವಚನ. ಸಾನ್ನಿಧ್ಯ: ಪಾವನಕೀರ್ತಿ ಮಹಾರಾಜರು. ಸ್ಥಳ: ಆದಿನಾಥ ದಿಗಂಬರ ಜಿನ ಮಂದಿರ, ಸೌತ್ ಎಂಡ್ ವೃತ್ತ, ಜಯನಗರ. ಮಧ್ಯಾಹ್ನ 2.30

ದ್ವಾದಶ ಸ್ತೋತ್ರ
ದೇವಗಿರಿ ಶ್ರೀ ಗುರುಸೇವಾ ಸಮಿತಿ: ಅಂಬರೀಷಾಚಾರ್ಯ ಅವರಿಂದ `ದ್ವಾದಶ ಸ್ತೋತ್ರ ಹಾಗೂ ಪ್ರೋಷ್ಠಪದಿ~ ಪ್ರವಚನ. ಸ್ಥಳ: 24ನೇ ಮೇನ್, ಬನಶಂಕರಿ 2ನೇ ಹಂತ. ನಿತ್ಯ ಸಂಜೆ 7.

ಭಗವದ್ಗೀತೆ
ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಗಣೇಶ ಭಟ್ಟ ಹೋಬಳಿ ಅವರಿಂದ `ಭಗವದ್ಗೀತೆ~ ಉಪನ್ಯಾಸ. ಸ್ಥಳ: ಬಸವನಗುಡಿ ರಸ್ತೆ. ನರಸಿಂಹರಾಜ ಕಾಲೋನಿ. ನಿತ್ಯ ಸಂಜೆ 6.30.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT