ಓಂ ಶಕ್ತಿ ಕಪಾಲಿ ಮತ್ತು ಶ್ರೀ ಶಕ್ತಿಭೈರವ ಪ್ರಕಾಶನ ಕನ್ನಡ ಪತ್ರಿಕಾ ಓದುಗರ ಬಳಗ ಸಹಯೋಗದೊಂದಿಗೆ ಹಿರಿಯ ಪತ್ರಿಕೋದ್ಯಮಿ, ಹೃದಯವಂತ ದಿ. ನೆಟ್ಟಕಲ್ಲಪ್ಪ ಅವರ 81ನೇ ಜನ್ಮದಿನೋತ್ಸವದ ಅಂಗವಾಗಿ ಇತ್ತೀಚೆಗೆ ಶಾಲಾ, ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಿತ್ತು. ಪೋಸ್ಟ್ ಕಾರ್ಡಿನಲ್ಲಿ ಚಿತ್ರ ರಚನೆ, ಚಿತ್ರ- ರಂಗೋಲಿ ಮತ್ತು ನೃತ್ಯ- ಗಾಯನ ಸ್ಪರ್ಧೆಗಳು ನಡೆದವು.