ಸಾಧನ ಸಂಗಮ ಟ್ರಸ್ಟ್: ಶನಿವಾರ ರಜತ ಸಂಭ್ರಮ. 60 ಕಲಾವಿದರಿಂದ `ವಿಶ್ವಾಮಿತ್ರ ಗಾಯತ್ರಿ~, `ಸೂರ್ಯಾಂಜಲಿ ನೃತ್ಯ~, `ಕಸ್ತೂರಿ ಮೃಗ~ ಎಂಬ ಮೂರು ನೃತ್ಯ ರೂಪಕಗಳ ಪ್ರದರ್ಶನ.
ಉದ್ಘಾಟನೆ: ಡಾ.ಆರ್. ಸತ್ಯನಾರಾಯಣ. ಅತಿಥಿಗಳು: ಪ್ರೊ.ಚೂಡಾಮಣಿ ನಂದಗೋಪಾಲ್, ಆರ್.ಶಾರದಮ್ಮ.
25 ವರ್ಷಗಳಿಂದ ನಿರಂತರವಾಗಿ ಯೋಗ, ನೃತ್ಯ, ಆತ್ಮವಿದ್ಯೆ ಹಾಗೂ ಸಂಗೀತ ಹೀಗೆ ಸಮಗ್ರ ಶಿಕ್ಷಣದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಬರುತ್ತಿರುವ ಸಾಧನ ಸಂಗಮ ಟ್ರಸ್ಟ್ಗೆ ಈಗ 25ರ ಸಡಗರ.
1986ರಲ್ಲಿ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆಗೆ ಪಟ್ಟಾಭಿರಾಮ್ ಮತ್ತು ವಿದುಷಿ ಜ್ಯೋತಿ ಪಟ್ಟಾಭಿರಾಮ್ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚೆನ್ನಪಟ್ಟಣದ ಕಣ್ವ ಜಲಾಶಯದ ಬಳಿ ಸಾಧನಧಾಮ ಆಶ್ರಮ ಸ್ಥಾಪಿಸಿ ಅಲ್ಲಿ ಯೋಗ, ನೃತ್ಯ ಶಿಕ್ಷಣವಲ್ಲದೇ ಸುತ್ತ ಮುತ್ತಲಿನ ಗ್ರಾಮಗಳ ಮಕ್ಕಳಿಗೆ ಉಚಿತ ಗುರುಕುಲ ಮಾದರಿ ಶಿಕ್ಷಣ ನೀಡುತ್ತಿದೆ. ವಿದೇಶಗಳಲ್ಲೂ ಯೋಗ, ಭಾರತೀಯ ನೃತ್ಯ ಪರಂಪರೆಗಳ ಬಗ್ಗೆ ಪ್ರಸಾರ ಕಾರ್ಯ ನಡೆಸುತ್ತಿದೆ. ಸ್ಥಳ: ಡಾ. ರಾಜ್ ಕುಮಾರ್ ಸಭಾಂಗಣ, ಆರ್ಟಿಓ ಕಚೇರಿ, ರಾಜಾಜಿನಗರ.ಸಂಜೆ 5. ಮಾಹಿತಿಗೆ: 2322 2611.