ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಮಾತನಾಡಿ, `ಜಂಜಡದ ಬದುಕಿನಲ್ಲಿ ಪುಸ್ತಕಗಳ ಓದು ಹೊರ ಜಗತ್ತಿನ, ಹೊರ ಆಯಾಮಗಳನ್ನು ತಿಳಿಸುತ್ತದೆ. ಹೀಗಾಗಿ ಎಲ್ಲರೂ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಅಡಿಗರ ನಂತರ ಮೌಲಿಕವಾದ ಕಾವ್ಯ ರಚನೆ ಮಾಡಿರುವ ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರು ವೈವಿಧ್ಯಮಯ ಭಾವ, ಛಂದಸ್ಸುಗಳನ್ನು ತಮ್ಮ ಕಾವ್ಯದಲ್ಲಿ ಬಳಸಿಕೊಂಡಿದ್ದಾರೆ~ ಎಂದರು.