ರಾಯಚೂರು ಪ್ರಭಾರ ಸಹಾಯಕ ಆಯುಕ್ತ ಯೋಗೇಶ ಮಾತನಾಡಿ, ಪಾರದರ್ಶಕ ಆಡಳಿತ ಕಲ್ಪಿಸುವಲ್ಲಿ ತಂತ್ರಜ್ಞಾನ ಬಹುಮಟ್ಟಿಗೆ ಸಹಕಾರಿಯಾಗಿದೆ. ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಹಿನ್ನೆಡೆ, ಜನತೆಯ ಅರ್ಜಿಗಳು ಯಾವ ಹಂತದಲ್ಲಿವೆ? ಎಲ್ಲಿ ವಿಳಂಬ ಆಗುತ್ತಿದೆ? ಯಾರು ಹೊಣೆಗಾರರು ಎಂಬುದೆಲ್ಲವೂ ಇ-ಆಡಳಿತದಿಂದ ಬೇಗ ಬಯಲಾಗುತ್ತದೆ. ಬಹಳಷ್ಟು ಸಾಫ್ಟವೇರ್ ಇದ್ದರೂ ಸಮರ್ಪಕ ರೀತಿ ಬಳಸಿಕೊಳ್ಳಲು ಆಗುತ್ತಿಲ್ಲ ಎಂದು ಹೇಳಿದರು.