ಜಾನ್ಜಿಬಾರ್ನಲ್ಲಿ ಕ್ರಾಂತಿ: ಹೊಸ ಸರ್ಕಾರ
ಜಾನ್ಜಿಬಾರ್, ಜ. 12– ಜಾನ್ಜಿಬಾರ್ ಗಣರಾಜ್ಯವಾಗಿದೆಯೆಂದೂ, ಕ್ರಾಂತಿಕಾರಿ ಪಕ್ಷದ ಹೊಸ ಸರ್ಕಾರವೊಂದು ರಚಿತವಾಗಿದೆಯೆಂದೂ ಜಾನ್ಜಿಬಾರ್ ರೇಡಿಯೊ ಈ ರಾತ್ರಿ ಪ್ರಕಟಪಡಿಸಿತು. ಹೊಸ ಸರಕಾರಕ್ಕೆ ಆಪ್ರೊ–ಫಿರಾಜಿ ಪಕ್ಷದ ನಾಯಕ ಷೇಕ್ ಒಬೇದ್ ಕರುಮೆ ಅವರು ಮುಖ್ಯಸ್ಥ-ರಾಗಿದ್ದಾರೆಂದು ರೇಡಿಯೊ ತಿಳಿಸಿತು.
ತುಂಬ ನೆಲೆಯಿಂದ ಮೂರನೆ ರಾಕೆಟ್ ಯಶಸ್ವಿ ಪ್ರಯೋಗ
ತಿರುವನಂತಪುರ, ಜ. 12– ಭಾರತದ ಮೂರನೆಯ ಅಂತರಿಕ್ಷ ಶೋಧನೆ ರಾಕೆಟ್ ಅನ್ನು ಇಂದು ಬೆಳಗ್ಗೆ 5–56ಕ್ಕೆ ಇಲ್ಲಿಗೆ ಸಮೀಪದಲ್ಲಿರುವ ತುಂಬಾ ಪ್ರಯೋಗ ನೆಲೆಯಿಂದ ಯಶಸ್ವಿಯಾಗಿ ಹಾರಿಸಲಾಯಿತೆಂದು ಪ್ರಯೋಗ ಯೋಜನೆಯ ಡೈರೆಕ್ಟರ್ ಡಾ. ಮೂರ್ತಿ ಅವರಿಂದ ತಿಳಿದುಬಂದಿದೆ.