ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಪಡೆಯಲು ನೂಕುನುಗ್ಗಲು !

Last Updated 19 ಏಪ್ರಿಲ್ 2013, 8:44 IST
ಅಕ್ಷರ ಗಾತ್ರ

ನರಗುಂದ: ನಾಮಪತ್ರ ಸಲ್ಲಿಸುವ ಅಂತಿಮ ದಿನವಾದ ಬುಧವಾರ ಪಕ್ಷೇತರ ಅಭ್ಯರ್ಥಿ ವರ್ತೂರ ರಮಾನಂದರು ವಿವಿಧ ಹಳ್ಳಿಗಳಿಂದ ಜನರನ್ನು ಕರೆಯಿಸಿದ್ದರು. ಆದರೆ ಅವರಿಗೆ ಬಸವೇಶ್ವರ ಸಮುದಾಯ ಭವನದ ಎದುರು  ಅವರ ವಾಹನಗಳಿಗೆ ರಮಾನಂದ ಬೆಂಬಲಿಗರು ಬಾಡಿಗೆ ಹಣ ನೀಡುತ್ತಿರುವಾಗ ಬಾರಿ ನೂಕು ನುಗ್ಗಲು ಉಂಟಾದ ಘಟನೆ ನಡೆದಿದೆ.

ವಿಷಯ ತಿಳಿದ ಚುನಾವಣಾ ನೀತಿ ಸಂಹಿತೆ ಅಧಿಕಾರಿ ಬಿ.ವಿ.ಪಾಟೀಲ, ಸಂಚಾರಿ ಅಧಿಕಾರಿ ವಿ.ವೈ.ಹುಣಸಿಕಟ್ಟಿ ಆಗಮಿಸಿ ಪರಿಶೀಲನೆ ನಡೆಸಿದರು. ನೂಕು ನುಗ್ಗಲು ಉಂಟಾದ ಘಟನೆ ಕುರಿತು ಇದೇ ಅಧಿಕಾರಿಗಳು  ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಸಿಪಿಐ ಪ್ರಶಾಂತ ಸಿದ್ದನಗೌಡ್ರ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಈ ಕುರಿತು ಮಾತನಾಡಿದ ಚುನಾವಣಾ ನೀತಿ ಸಂಹಿತೆ ಅಧಿಕಾರಿ ಬಿ.ವಿ.ಪಾಟೀಲ ` ವರ್ತೂರು ರಮಾನಂದರ ಬೆಂಬಲಿಗರು  ಬಾಡಿಗೆ ಹಣ ನೀಡುತ್ತಿರುವುದನ್ನು ಚಿತ್ರೀಕರಿಸಲಾಗಿದೆ. ಇದರ ಪ್ರತಿಯನ್ನು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ. ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT