ಬನ್ನೇರುಘಟ್ಟ ರಸ್ತೆಯ ಕಾರ್ಮಿಕ ಭವನದ ಮುಂದಿನ ಡೈರಿ ವೃತ್ತಕ್ಕೆ ಹೋಗುವ ರಸ್ತೆಯಲ್ಲಿ ಸುಮಾರು ಅರ್ಧ ಅಡಿಗಿಂತಲೂ ಹೆಚ್ಚು ಆಳದ ಹಾಗೂ ಎರಡು–ಮೂರು ಅಡಿಗಳ ಅಗಲದ ಅನೇಕ ಕಂದಕಗಳಿದ್ದು, ಸಾರ್ವಜನಿಕ ಹಾಗೂ ಖಾಸಗಿ ವಾಹನಗಳಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರು ಮತ್ತು ಕಿದ್ವಾಯಿ ಹಾಗೂ ಮಾನಸಿಕ ಆರೋಗ್ಯದ ಆಸ್ಪತ್ರೆಗಳಿಗೆ ಹೋಗುವ ರೋಗಿಗಳಿಗೆ ಈ ರೀತಿಯ ಕಂದಕಗಳಿಂದ ಅಪಘಾತವಾಗುವ ಸಂಭವವಿದೆ. ತಕ್ಷಣ ಈ ಗುಂಡಿಗಳನ್ನು ಮುಚ್ಚಬೇಕು. ಪಾದಚಾರಿ ರಸ್ತೆಯಲ್ಲಿ ಹಾಕಿರುವ ಮಣ್ಣಿನ ಗುಡ್ಡೆಗಳನ್ನು ತೆರವುಗೊಳಿಸಬೇಕು.
–ಜೆ.ಆರ್.ಆದಿನಾರಾಯಣಮುನಿ.