ಚಿಂಚೋಳಿ: ‘ಬಡವರು ಊಟಕ್ಕೋ ಇಲ್ಲವೋ ಚಿಕಿತ್ಸೆಗಾಗಿಯೋ ಆಭರಣ ಒತ್ತೆಯಿಟ್ಟು ಸಾಲ ಮಾಡಿದಾಗ, ಇಂದಿರಾ ಗಾಂಧಿ ಋಣ ಪರಿಹಾರ ಕಾಯ್ದೆ ಜಾರಿ ಮಾಡಿ ಒತ್ತೆಯಿಟ್ಟ ವಡವೆ, ವಸ್ತು ಬಿಡಿಸಿಕೊಟ್ಟರು. ಬಡವರ ಹಸಿವು ನೀಗಿಸಲು ಸಿದ್ದರಾಮಯ್ಯನವರು ಅನ್ನಭಾಗ್ಯ ಯೋಜನೆ ಜಾರಿ ಮಾಡಿ, ವಿವಿಧ ನಿಗಮಗಳಲ್ಲಿನ ಬಡವರ ಸಾಲ ಮನ್ನಾ ಮಾಡಿದರು’ ಎಂದು ವಿಧಾನ ಸಭೆಯ ಮಾಜಿ ಸ್ಪೀಕರ್ ಹಾಗೂ ಶಾಸಕ ರಮೇಶಕುಮಾರ ಹೇಳಿದರು.
ಅವರು ಇಲ್ಲಿನ ವೀರೇಂದ್ರ ಪಾಟೀಲ ಪಬ್ಲಿಕ್ ಶಾಲೆಯ ಆವರಣದಲ್ಲಿ ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎನ್.ಧರ್ಮಸಿಂಗ್ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಗುರುವಾರ ಮಾತನಾಡಿದರು.
‘ಅಂದು ಬಡವರನ್ನು ಋಣಮುಕ್ತರಾಗಿ ಮಾಡಿದ ಇಂದಿರಾ ಗಾಂಧಿ-ಯನ್ನು ವಿರೋಧಿಸಿದವರೇ ಇಂದು ಬಡವರು ಹೊಟ್ಟೆ ತುಂಬಾ ಉಣ್ಣುವುದನ್ನು ಸಹಿಸಲು ಆಗದ ಬಲಾಢ್ಯರು, ಸಿದ್ದರಾಮಯ್ಯ ಸೋಮಾರಿಗಳ ರಾಜ್ಯ ಮಾಡಲು ಹೊರಟಿದ್ದಾರೆ’ ಎನ್ನುತ್ತಿದ್ದಾರೆ. ಇದು ‘ಕುದುರೆ ಹುರುಳಿ ತಿಂದರೆ ಕತ್ತೆಗೆ ಹೊಟ್ಟೆನೋವು’ ಎಂಬಂತಾಗಿದೆ ಎಂದು ವ್ಯಂಗ್ಯವಾಡಿದರು.
ಶಾಸಕ ಡಾ. ಉಮೇಶ ಜಾಧವ್ , ಮಾಜಿ ಸಚಿವ ವೈಜನಾಥ ಪಾಟೀಲ, ಮಾಜಿ ಶಾಸಕ ಕೈಲಾಸ ವೀರೇಂದ್ರ ಪಾಟೀಲ, ಬಿ. ನಾರಾಯಣರಾವ್, ಖಾಜಿ ಅರ್ಷದ್ ಅಲಿ, ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ, ಕೆ.ಎಂ ಬಾರಿ, ರೇವಣಸಿದ್ದಪ್ ಸಾತನೂರು ಮಾತನಾಡಿದರು.
ಭೀಮರಾವ್ ಟಿ.ಟಿ, ಬಸಯ್ಯ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರು, ಶಿವಕುಮಾರ ಕೊಳ್ಳೂರು, ಡಾ. ವಿಕ್ರಂ ಪಾಟೀಲ, ಸುರೇಶ ಸಜ್ಜನ್, ಜಗದೇವ ಗುತ್ತೇದಾರ, ಶಾಮರಾವ್ ರಾಠೋಡ್, ಇಲಿಯಾಸ್ ಸೇಠ ಬಾಗವಾನ್, ರವಿರಾಜ ಕೊರವಿ, ದೀಪಕನಾಗ್ ಪುಣ್ಯಶೆಟ್ಟಿ, ಲಕ್ಷ್ಮಣ ಆವುಂಟಿ, ಜಗದೀಶಸಿಂಗ್ ಠಾಕೂರು, ಜಗನ್ನಾಥ ಈದಲಾಯಿ, ಬಸವಣ್ಣ ಪಾಟೀಲ, ರಾಮಚಂದ್ರ ಜಾಧವ್, ಅರುಣ ಪವಾರ್,ಚಂದ್ರಶೇಖರ ಗುತ್ತೇ-ದಾರ, ಝರಣಪ್ಪ ಚಿಂಚೋಳಿ, ಮಧುಸೂದನರೆಡ್ಡಿ, ರಾಮಶೆಟ್ಟಿ ಪವಾರ್, ಬಸವರಾಜ ಪಾಟೀಲ ಹೇರೂರು, ಕಮಲಾಬಾಯಿ ಹೇರೂರು, ಸವಿತಾ ಸಜ್ಜನಶೆಟ್ಟಿ, ಜಯಶ್ರೀ ಸಜ್ಜನಶೆಟ್ಟಿ, ವೀರಮ್ಮಾ ಸಂಗಯ್ಯಸ್ವಾಮಿ, ಉಮಾ ಪಾಟೀಲ, ಡಾ. ತುಕಾರಾಮ ಪವಾರ್, ಸಿ.ಬಿ.ಪಾಟೀಲ ಓಕಳಿ ಇದ್ದರು.
ಹಲವಾರು ಮುಖಂಡರು ವಿವಿಧ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಸೇರಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಜಮಾದಾರ ಸ್ವಾಗತಿಸಿದರು.ಬಸವರಾಜ ಪಾಟೀಲ ಹೇರೂರು ನಿರೂಪಿಸಿದರು. ರಸೂಲ್ ಇನಾಂದಾರ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.