ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ’

Last Updated 5 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಳಗಾವಿಯಲ್ಲಿ ಮಿಲಿಟರಿ ಆಡಳಿತ ನಡೆಯುತ್ತಿದೆ. ಅಲ್ಲಿನ ಜಿಲ್ಲಾಡಳಿತ ಕನ್ನಡಿಗರನ್ನು ತುಳಿಯು­ತ್ತಿದ್ದರೆ, ಪೊಲೀಸರು ದಬ್ಬಾಳಿಕೆ ನಡೆಸುತ್ತಿ­ದ್ದಾರೆ’ ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಆರೋಪಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಹಿರಿಯ ಪೊಲೀಸ್‌ ಅಧಿಕಾರಿಗಳು ಕನ್ನಡಿಗರ ಪರ­ವಾಗಿಲ್ಲ. ಕನ್ನಡ ಪರ ಸಂಘಟನೆಗಳ ಮೇಲೆ ನಾನಾ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಂಇಎಸ್‌ ಶಾಸಕರು ರಾಜ್ಯ ಮತ್ತು ಕನ್ನಡಿಗರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ವಿರೋಧಿಸಿ ಬೆಳಗಾವಿ­ಯಲ್ಲಿ ಪ್ರತಿಭಟಿಸಲು ಕನ್ನಡಪರ ಸಂಘಟನೆಗಳು ನಿರ್ಧರಿಸಿ­ದ್ದವು. ಅದ­ರಂತೆ ಬುಧವಾರ ಬೆಳಗಾವಿಗೆ ಹೊರ­ಟಿದ್ದ ಸಂಘಟನೆಗಳನ್ನು ಪೊಲೀಸರು ಶಿಗ್ಗಾವಿಯ ಬಳಿಯೇ ತಡೆದು ನಿಲ್ಲಿಸಿ­ದರು ಎಂದು ಅಸಮಾ­ಧಾನ ವ್ಯಕ್ತಪಡಿಸಿ­ದರು.

‘ಶಿಗ್ಗಾವಿಯಿಂದ ಮುಂದೆ ಹೋಗಲು ಬಿಡದ ಪೊಲೀಸರು ಬೆಂಗ­ಳೂರಿಗೆ ಹಿಂತಿರುಗುವಂತೆ ಸೂಚಿಸಿದರು. ಹೀಗೆ ನಮ್ಮ ರಾಜ್ಯದಲ್ಲೇ ನಮಗೆ ಸಂಚರಿಸ­ದಂತೆ ತಡೆದ ಈ ಪೊಲೀಸರು ಯಾರು’ ಎಂದು ಪ್ರಶ್ನಿಸಿದರು.

ಎಸ್ಮಾಗೆ ವಿರೋಧ: ಎಸ್ಮಾ ಕಾಯ್ದೆಗೆ ಅಧಿವೇಶನದಲ್ಲಿ ಅನುಮೋದನೆ ನೀಡಿರುವುದು ದುರಂತದ ಸಂಗತಿ. ಇದು ಕಾರ್ಮಿಕ ವಿರೋಧಿ ಮತ್ತು ಅಪಾಯ­ಕಾರಿ ಕಾಯ್ದೆ. ಕಾರ್ಮಿಕರ ಹೋರಾಟ­ಗಳನ್ನು ಹತ್ತಿಕ್ಕಲು ಇದನ್ನು ಜಾರಿಗೆ ತರಲಾಗಿದೆ. ಈ ಸಂಬಂಧ ಸದ್ಯದಲ್ಲೇ ಕಾರ್ಮಿಕರ ಸಂಘಟನೆ­ಗಳೊಂದಿಗೆ ಚರ್ಚಿಸಿ, ಪ್ರತಿಭಟನೆ ನಡೆಸಲು ನಿರ್ಧರಿಸ­ಲಾಗುವುದು ಎಂದು ತಿಳಿಸಿದರು.

ನಿರ್ಮಾಪಕ ಸಾ.ರಾ.ಗೋವಿಂದು ಮಾತನಾಡಿ, ‘ಕನ್ನಡಪರ ಸಂಘಟನೆಗಳ ಹೋರಾಟದ ಫಲವಾಗಿ ಬೆಳಗಾವಿ­ಯಲ್ಲಿ ಸುವರ್ಣಸೌಧ ನಿರ್ಮಾಣ­ವಾಗಿದೆ. ಆದರೆ ಅಂತಹ ಸಂಘಟನೆ­ಗಳನ್ನೇ ಬೆಳಗಾವಿಗೆ ಬರಬೇಡಿ ಎಂದು ಪೊಲೀಸರು ತಡೆಯುತ್ತಿದ್ದಾರೆ. ಇದು ಸರಿಯಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT