ಚಿಕ್ಕಬಳ್ಳಾಪುರ: ಮಕ್ಕಳ ಶಿಕ್ಷಣ ಹಕ್ಕು ಶೋಷಣೆಯ ವಿರುದ್ಧ ಆಯುಧವಾಗಬೇಕು ಎಂದು ತಾಲ್ಲೂಕಿನ ಕ್ಷೇತ್ರ
ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ವೆಂಕಟೇಶ್ ತಿಳಿಸಿದರು.
ತಾಲ್ಲೂಕಿನಲ್ಲಿ ನಡೆಯುವ ಸಮುದಾಯ ಜಾಗೃತಿ ಶಿಬಿರವನ್ನು ಈಚೆಗೆ ನಗರದ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟಿಸಿ ಮಾತನಾಡಿದರು. ಈಗ ಆರ್ಟಿಇ ಕಾಯ್ದೆಯ ರೂಪದಲ್ಲಿ ಜಾರಿಗೆ ಬಂದಿರುವ ಈ ಮಕ್ಕಳ ಹಕ್ಕು, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುತ್ತದೆ ಎಂದರು.
ಪ್ರಜ್ಞಾ ಟ್ರಸ್ಟ್ನ ಯೋಜನಾ ನಿರ್ದೇಶಕ ಎನ್. ನಾಗರಾಜ್ ಮಾತನಾಡಿ ಕಲಾತಂಡವು ಸಮುದಾಯಕ್ಕೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದೆ ಹೇಳಿದರು.
ಕಾರ್ಯಕ್ರಮದಲ್ಲಿ ಸಮೂಹ ಸಂಪನ್ಮೂಲವ್ಯಕ್ತಿ ಮಂಜುನಾಥರೆಡ್ಡಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಹಾಜರಿದ್ದರು. ತಂಡದಲ್ಲಿ ಸಂಯೋಜಕಿ- ರೂಪಾ, ಕಲಾವಿದರಾದ ಎಚ್.ಸಿ. ನರಸಿಂಹಮೂರ್ತಿ, ಕೆ. ನರಸಿಂಹಮೂರ್ತಿ, ಕಿರಣ್, ಜಯಲಕ್ಷ್ಮಿ, ನಾರಾಯಣಸ್ವಾಮಿ, ಗಾಯತ್ರಿ ಇದ್ದರು.