ಕೃಷ್ಣರಾಜಪುರ: ‘ರಾಷ್ಟ್ರದಲ್ಲಿ ನಿರ್ಭೀತಿ ಯ ವಾತಾವರಣ ಸೃಷ್ಟಿಯಲ್ಲಿ ಯುವಕರು ಪಾಲುದಾರರಾಗಬೇಕು. ಯುವಶಕ್ತಿಯು ರಾಷ್ಟ್ರ ನಿರ್ಮಾಣದಲ್ಲಿ ಶಕ್ತಿಯುತವಾಗಿ ಹೊರಬರಬೇಕು. ಈ ನಿಟ್ಟಿನಲ್ಲಿ ಯುವಕರು ಸಂಘಟಿತರಾಗಬೇಕು’ ಎಂದು ಬಜರಂಗದಳದ ರಾಜ್ಯ ಘಟಕದ ಸಂಚಾಲಕ ಸೂರ್ಯನಾರಾಯಣ ಸಲಹೆ ನೀಡಿದರು.
ಬಸವನಪುರ ಗ್ರಾಮದಲ್ಲಿ ಏರ್ಪಡಿಸಿದ್ದ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಶಾಖೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇವಸಂದ್ರ ಸಾಧನ ಕೇಂದ್ರ ಅಧ್ಯಕ್ಷ ಚಂದ್ರೇಶಾನಂದಜೀ ಕಾರ್ಯಕ್ರಮ ಉದ್ಘಾಟಿಸಿದರು.