ಗದಗ: ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಸಾಧಿಸಲು ಏಕಾಗ್ರತೆ ಮತು್ತ ಶ್ರದ್ಧೆಯಿಂದ ಅಧ್ಯಯನ ನಿರತರಾಗಬೇಕು ಎಂದು ಹುಬ್ಬಳ್ಳಿಯ ಕಾಡಸಿದ್ದೇಶ್ವರ ಹಾಗೂ ಕೋತಂಬ್ರಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಂ.ಟಿ.ಕುರಣಿ ಹೇಳಿದರು.
ನಗರದ ಕೆ.ಎಲ್.ಇ. ಸಂಸ್ಥೆಯಲ್ಲಿ ಬಿ.ಎಸ್ಸಿ. ಪ್ರಥಮ ವರ್ಗದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಸಮಾರಂಭ ಉದಾ್ಘಟಿಸಿ ಮಾತನಾಡಿದ ಅವರು, ದೈಹಿಕ, ಬೌಧ್ದಿಕ ಮತ್ತು ಮಾನಸಿಕ ಬೆಳವಣಿಗೆ ಅತ್ಯವಶ್ಯ. ಸದೃಢ ಶರೀರವುಳ್ಳವರಾಗಬೇಕಾದರೆ ದುಶ್ಚಟಗಳಿಂದ ದೂರವಿರಬೇಕು. ಆಗ ಮಾತ್ರ ಬೌದ್ಧಿಕವಾಗಿ, ಮಾನಸಿಕವಾಗಿ ಸದೃಢರಾಗಿರಲು ಸಾಧ್ಯ. ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮಾನಸಿಕ ರೋಗದಿಂದ ಬಳಲುತ್ತಿರುವುದು ವಿಷಾದಕರ ಸಂಗತಿ ಎಂದು ತಿಳಿಸಿದರು.
ವಿದಾ್ಯರ್ಥಿಗಳಲಿ್ಲ ದೇಶ ಪ್ರೇಮವಿಲ್ಲದೆ ತನ್ನ ಮೇಲೆ ತನಗೆ ವಿಶ್ವಾಸ ಇಲ್ಲದಿರುವುದರಿಂದ ಪರಿಸರ ಮಾಲಿನ್ಯಗೊಂಡಿದೆ. ಕೋಟಿ ಕೈಗಳು ದುಡಿದರೆ ದೇಶದಲ್ಲಿ ಬಂಗಾರದ ಹೊಗೆ ಹಾಯುತ್ತಿತ್ತು. ದುಡಿಯದೇ ತಿನ್ನುವ, ಓದದೇ ಮಲಗುವ ಮನೋಭಾವವುಳ್ಳವರಾಗದೇ ಮರು ಉತ್ಪಾದನೆ ಮಾಡುವ ಶ್ರಮಿಕ ಸಂಸ್ಕೃತಿ ಹುಟ್ಟುಹಾಕಬೇಕು. ಸಾಂಸ್ಕೃತಿಕ ಪರಂಪರೆಯುಳ್ಳ ಭಾರತ ದೇಶದಲ್ಲಿ ಆಚಾರದಂತೆ ವಿಚಾರ, ವಿಚಾರದಂತೆ ಆಚಾರವುಳ್ಳರಾಗಿ ನಡೆದುಕೊಳ್ಳಬೇಕು. ಆಗ ಮಾತ್ರ ಭಾರತ ಸುಪರ್ ಪವರ ಬಲದಿಂದ ಜಗತ್ತಿನಲ್ಲಿಯೇ ನಂಬರ ಒನ್ ಆಗಲು ಸಾಧ್ಯ ಎಂದು ಅಭಿಪಾ್ರಯಪಟ್ಟರು,
ಪ್ರಾಚಾರ್ಯ ಪ್ರೊ.ಎಸ್.ಎಸ್.ಯಂಕಂಚಿ ಮಾತನಾಡಿ, ವಿದ್ಯಾರ್ಥಿಗಳ ಮನಸಿನಲಿ್ಲ ಅಡಗಿರುವ ಬಲದಿಂದ ಶ್ರೇಷ್ಠ ಸಾಧಕರಾಗಲು ಸಾಧ್ಯವಿದೆ ಎಂದು ಕಿವಿ ಮಾತು ಹೇಳಿದರು.
ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ವಿ.ಐ.ಕುರಗೋಡ ಅಧ್ಯಕ್ಷತೆ ವಹಿಸಿದ್ದರು. ವಿದಾ್ಯರ್ಥಿ ಕಲ್ಯಾಣಾಧಿಕಾರಿ ಪ್ರೊ.ಎಸ್.ಜೆ.ಹಿರೇಮಠ, ಅಕ್ಷತಾ ತೊಟಗೇರ ಪ್ರಾರ್ಥಿಸಿದರು, ಬಸವರಾಜ ಅಂಗಡಿ ಸ್ವಾಗತಿಸಿದರು, ನಾಜೀಶ ಪರಿಚಯಿಸಿದರು. ಪ್ರೊ.ಎಂ.ಬಿ.ಚನ್ನಪ್ಪಗೌಡರ, ಪೊ್ರ. ಎಮ್.ಎಮ್.ನರಗುಂದ ಹಾಜರಿದ್ದರು. ರಾಜೇಶ್ವರಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.