<p>ಕೆಂಗೇರಿ– ಉತ್ತರಹಳ್ಳಿ (ಡಾ.ವಿಷ್ಣುವರ್ಧನ್ ರಸ್ತೆ) ಮುಖ್ಯರಸ್ತೆಯಲ್ಲಿ ಸಾಗುವಾಗಲೇ ಆಕರ್ಷಿಸಿದ್ದು ಹಸಿರು ದೀಪಗಳಿಂದ ಅಲಂಕೃತಗೊಂಡಿದ್ದ ‘ಗ್ಲೋಬಲ್ ಕೃಷ್ಣಲೀಲಾ’ ವೆಜ್ ಹೋಟೆಲ್. ಮೈಲಸಂದ್ರದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಬಳಿ ಇರುವ ಈ ಹೋಟೆಲ್ ಜನಜಂಗುಳಿಯಿಂದ ಕೂಡಿತ್ತು.</p>.<p>ಹೋಟೆಲ್ ಪ್ರವೇಶಿಸುತ್ತಿದ್ದಂತೆ ಪುಳಿಯೋಗರೆ, ವಾಂಗಿಬಾತ್, ಬಿಸಿಬೇಳೆಬಾತ್, ವಿವಿಧ ತರಕಾರಿಗಳಿಂದ ಸಿದ್ಧವಾಗುತ್ತಿದ್ದ ದೋಸೆಗಳು, ಮಸಾಲೆ ದೋಸೆ, ತರಕಾರಿ ಫಲಾವ್ನ ಘಮಘಮ ಸುವಾಸನೆ ಸ್ವಾಗತಿಸಿತು. ಆತ್ಮೀಯವಾಗಿ ಬರಮಾಡಿಕೊಂಡ ಹೋಟೆಲ್ ಮಾಲೀಕ ಮಹಾವೀರ್ ಜೈನ್ ನಗುಮೊಗದೊಂದಿಗೆ ಹೋಟೆಲ್ನ ವಿಶೇಷ ಖಾದ್ಯಗಳನ್ನು ಪರಿಚಯಿಸಿದರು.</p>.<p>ಬೆಳಿಗ್ಗೆ 6.30ರಿಂದ ರಾತ್ರಿ 10.30 ಗಂಟೆಯವರೆಗೆ ದಕ್ಷಿಣ ಮತ್ತು ಉತ್ತರ ಭಾರತದ ಸಾಂಪ್ರದಾಯಿಕ ರುಚಿಯ ಹಲವಾರು ಬಗೆಯ ಖಾದ್ಯಗಳು ಇಲ್ಲಿ ದೊರೆಯುತ್ತವೆ.</p>.<p>‘ಯಾವ ಖಾದ್ಯದ ರುಚಿ ನೋಡುತ್ತೀರಾ?’ ಎಂದು ಹೇಳುತ್ತಲೇ ಮಸಾಲೆ ದೋಸೆ ತಂದು ರುಚಿ ನೋಡಿ ಎಂದರು.<br />ಉತ್ತರ ಮತ್ತು ದಕ್ಷಿಣ ಭಾರತದ ಊಟದ ವ್ಯವಸ್ಥೆ ಇಲ್ಲಿದ್ದು ಏಳೂ ದಿನವೂ ಒಂದೊಂದು ಬಗೆಯ ರುಚಿಯನ್ನು ಜನರಿಗೆ ಉಣಬಡಿಸಲಾಗುತ್ತಿದೆ. ಜೋಳದ ರೊಟ್ಟಿ, ಚಪಾತಿ, ಪೂರಿ, ಅಕ್ಕಿರೊಟ್ಟಿ, ಕಡಕ್ ರೊಟ್ಟಿ ಹೀಗೆ ನಿತ್ಯವೂ ಗ್ರಾಹಕರು ಹೊಸ ರುಚಿ ಸವಿಯಬಹುದು.</p>.<p>‘ತಿಂಡಿ ತಯಾರಿಸಲು ನಂದಿನಿ ತುಪ್ಪ, ರಿಫೈಂಡ್ ಆಯಿಲ್ ಮಾತ್ರ ಬಳಸುತ್ತೇವೆ, ಯಾವುದೇ ಕಾರಣಕ್ಕೂ ಕಲರ್ ಮತ್ತು ಟೇಸ್ಟಿಂಗ್ ಪೌಡರ್’ ಬಳಸುವುದಿಲ್ಲ ಎನ್ನುತ್ತಾರೆ ಮಹಾವೀರ್ ಜೈನ್.</p>.<p>‘ಪನೀರ್, ಬೇಬಿಕಾರ್ನ್, ಗೋಬಿ ಹಲವಾರು ಖಾದ್ಯಗಳಿಗೆ ಕಾಶ್ಮೀರದ ಚಿಲ್ಲಿಪೌಡರ್ ಬಳಸುತ್ತೇವೆ. ಅದರಿಂದ ಖಾದ್ಯಗಳು ಕೆಂಪಾಗುತ್ತವೆ. ಗೋಡಂಬಿ ಪೊಂಗಲ್, ಸಿಹಿ ಪೊಂಗಲ್, ಮೆಂತ್ಯಬಾತು, ಹೆಸರುಬೇಳೆ ಪಾಯಸ ನಮ್ಮ ಹೋಟೆಲ್ನ ಗ್ರಾಹಕರ ಅಚ್ಚುಮೆಚ್ಚಿನ ತಿನಿಸು’ ಎಂದು ಹೇಳುತ್ತಾರೆ ಅವರು.</p>.<p>ಅಕ್ಕಿ, ರವಾ, ಮೇತಿ, ಬಟರ್ ರೋಟಿ, ಚೆನ್ನಾ ಬತುರಾ, ಬಗೆಬಗೆಯ ಪರೋಟ, ನಾನ್, ಕುಲ್ಚಾಗಳು ತರಹೇವಾರಿ ಪಲ್ಯಗಳು, ಸೂಪ್, ಸಲಾಡ್, ವಿವಿಧ ಬಗೆಯ ದೋಸೆಗಳು ಇಲ್ಲಿ ಲಭ್ಯ. ಉತ್ತರ ಭಾರತೀಯ ಶೈಲಿಯ ಆಹಾರ ಸವಿಯನ್ನು ಇಲ್ಲಿ ಸವಿಯಬಹುದು.</p>.<p>ವಿಶೇಷವಾಗಿ ಐಸ್ಕ್ರೀಂ, ಜ್ಯೂಸ್, ವಿಭಿನ್ನ ಸ್ವಾದದ ಕಾಫಿ, ಟೀಗಳು ಲಭ್ಯ. 250 ಜನರು ಕೂರುವ ಹವಾನಿಯಂತ್ರಿತ ಪಾರ್ಟಿ ಹಾಲ್ ಇಲ್ಲಿದೆ.</p>.<p>ಉಡುಪಿ ಜಿಲ್ಲೆಯವರಾದ ಮಹಾವೀರ್ ಜೈನ್, ಅರ್ಧಕ್ಕೆ ವಿದ್ಯಾಭ್ಯಾಸ ಸ್ಥಗಿತಗೊಳಿಸಿ ಮುಂಬೈಗೆ ಹೋದರು. ಅಲ್ಲಿ ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡು ಡಿಪ್ಲೊಮಾ ಇನ್ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಪೂರೈಸಿದರು. ಬಳಿಕ ಬೆಂಗಳೂರಿಗೆ ಬಂದು ಹೋಟೆಲೊಂದರಲ್ಲಿ ಮುಖ್ಯ ಅಡುಗೆಯವರಾಗಿ ಕೆಲಸ ಮಾಡಿದರು.</p>.<p>***</p>.<p><br /><strong>ರೆಸ್ಟೊರೆಂಟ್: ಗ್ಲೋಬಲ್ ಕೃಷ್ಣಲೀಲಾ ವೆಜ್ ಹೋಟೆಲ್<br />ಸಮಯ: ಬೆಳಿಗ್ಗೆ 6.30ರಿಂದ ರಾತ್ರಿ 10.30ರವರೆಗೆ<br />ವಿಶೇಷ : ಉತ್ತರ–ದಕ್ಷಿಣ ಭಾರತೀಯಶೈಲಿಯ ಆಹಾರ<br />ಸ್ಥಳ: ನಂ.6, ಡಾ.ವಿಷ್ಣುವರ್ಧನ್ ರಸ್ತೆ (ಕೆಂಗೇರಿ– ಉತ್ತರಹಳ್ಳಿ ರಸ್ತೆ), ಮೈಲಸಂದ್ರ, ಬಿಜಿಎಸ್ಆಸ್ಪತ್ರೆ ಸಮೀಪ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೆಂಗೇರಿ– ಉತ್ತರಹಳ್ಳಿ (ಡಾ.ವಿಷ್ಣುವರ್ಧನ್ ರಸ್ತೆ) ಮುಖ್ಯರಸ್ತೆಯಲ್ಲಿ ಸಾಗುವಾಗಲೇ ಆಕರ್ಷಿಸಿದ್ದು ಹಸಿರು ದೀಪಗಳಿಂದ ಅಲಂಕೃತಗೊಂಡಿದ್ದ ‘ಗ್ಲೋಬಲ್ ಕೃಷ್ಣಲೀಲಾ’ ವೆಜ್ ಹೋಟೆಲ್. ಮೈಲಸಂದ್ರದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಬಳಿ ಇರುವ ಈ ಹೋಟೆಲ್ ಜನಜಂಗುಳಿಯಿಂದ ಕೂಡಿತ್ತು.</p>.<p>ಹೋಟೆಲ್ ಪ್ರವೇಶಿಸುತ್ತಿದ್ದಂತೆ ಪುಳಿಯೋಗರೆ, ವಾಂಗಿಬಾತ್, ಬಿಸಿಬೇಳೆಬಾತ್, ವಿವಿಧ ತರಕಾರಿಗಳಿಂದ ಸಿದ್ಧವಾಗುತ್ತಿದ್ದ ದೋಸೆಗಳು, ಮಸಾಲೆ ದೋಸೆ, ತರಕಾರಿ ಫಲಾವ್ನ ಘಮಘಮ ಸುವಾಸನೆ ಸ್ವಾಗತಿಸಿತು. ಆತ್ಮೀಯವಾಗಿ ಬರಮಾಡಿಕೊಂಡ ಹೋಟೆಲ್ ಮಾಲೀಕ ಮಹಾವೀರ್ ಜೈನ್ ನಗುಮೊಗದೊಂದಿಗೆ ಹೋಟೆಲ್ನ ವಿಶೇಷ ಖಾದ್ಯಗಳನ್ನು ಪರಿಚಯಿಸಿದರು.</p>.<p>ಬೆಳಿಗ್ಗೆ 6.30ರಿಂದ ರಾತ್ರಿ 10.30 ಗಂಟೆಯವರೆಗೆ ದಕ್ಷಿಣ ಮತ್ತು ಉತ್ತರ ಭಾರತದ ಸಾಂಪ್ರದಾಯಿಕ ರುಚಿಯ ಹಲವಾರು ಬಗೆಯ ಖಾದ್ಯಗಳು ಇಲ್ಲಿ ದೊರೆಯುತ್ತವೆ.</p>.<p>‘ಯಾವ ಖಾದ್ಯದ ರುಚಿ ನೋಡುತ್ತೀರಾ?’ ಎಂದು ಹೇಳುತ್ತಲೇ ಮಸಾಲೆ ದೋಸೆ ತಂದು ರುಚಿ ನೋಡಿ ಎಂದರು.<br />ಉತ್ತರ ಮತ್ತು ದಕ್ಷಿಣ ಭಾರತದ ಊಟದ ವ್ಯವಸ್ಥೆ ಇಲ್ಲಿದ್ದು ಏಳೂ ದಿನವೂ ಒಂದೊಂದು ಬಗೆಯ ರುಚಿಯನ್ನು ಜನರಿಗೆ ಉಣಬಡಿಸಲಾಗುತ್ತಿದೆ. ಜೋಳದ ರೊಟ್ಟಿ, ಚಪಾತಿ, ಪೂರಿ, ಅಕ್ಕಿರೊಟ್ಟಿ, ಕಡಕ್ ರೊಟ್ಟಿ ಹೀಗೆ ನಿತ್ಯವೂ ಗ್ರಾಹಕರು ಹೊಸ ರುಚಿ ಸವಿಯಬಹುದು.</p>.<p>‘ತಿಂಡಿ ತಯಾರಿಸಲು ನಂದಿನಿ ತುಪ್ಪ, ರಿಫೈಂಡ್ ಆಯಿಲ್ ಮಾತ್ರ ಬಳಸುತ್ತೇವೆ, ಯಾವುದೇ ಕಾರಣಕ್ಕೂ ಕಲರ್ ಮತ್ತು ಟೇಸ್ಟಿಂಗ್ ಪೌಡರ್’ ಬಳಸುವುದಿಲ್ಲ ಎನ್ನುತ್ತಾರೆ ಮಹಾವೀರ್ ಜೈನ್.</p>.<p>‘ಪನೀರ್, ಬೇಬಿಕಾರ್ನ್, ಗೋಬಿ ಹಲವಾರು ಖಾದ್ಯಗಳಿಗೆ ಕಾಶ್ಮೀರದ ಚಿಲ್ಲಿಪೌಡರ್ ಬಳಸುತ್ತೇವೆ. ಅದರಿಂದ ಖಾದ್ಯಗಳು ಕೆಂಪಾಗುತ್ತವೆ. ಗೋಡಂಬಿ ಪೊಂಗಲ್, ಸಿಹಿ ಪೊಂಗಲ್, ಮೆಂತ್ಯಬಾತು, ಹೆಸರುಬೇಳೆ ಪಾಯಸ ನಮ್ಮ ಹೋಟೆಲ್ನ ಗ್ರಾಹಕರ ಅಚ್ಚುಮೆಚ್ಚಿನ ತಿನಿಸು’ ಎಂದು ಹೇಳುತ್ತಾರೆ ಅವರು.</p>.<p>ಅಕ್ಕಿ, ರವಾ, ಮೇತಿ, ಬಟರ್ ರೋಟಿ, ಚೆನ್ನಾ ಬತುರಾ, ಬಗೆಬಗೆಯ ಪರೋಟ, ನಾನ್, ಕುಲ್ಚಾಗಳು ತರಹೇವಾರಿ ಪಲ್ಯಗಳು, ಸೂಪ್, ಸಲಾಡ್, ವಿವಿಧ ಬಗೆಯ ದೋಸೆಗಳು ಇಲ್ಲಿ ಲಭ್ಯ. ಉತ್ತರ ಭಾರತೀಯ ಶೈಲಿಯ ಆಹಾರ ಸವಿಯನ್ನು ಇಲ್ಲಿ ಸವಿಯಬಹುದು.</p>.<p>ವಿಶೇಷವಾಗಿ ಐಸ್ಕ್ರೀಂ, ಜ್ಯೂಸ್, ವಿಭಿನ್ನ ಸ್ವಾದದ ಕಾಫಿ, ಟೀಗಳು ಲಭ್ಯ. 250 ಜನರು ಕೂರುವ ಹವಾನಿಯಂತ್ರಿತ ಪಾರ್ಟಿ ಹಾಲ್ ಇಲ್ಲಿದೆ.</p>.<p>ಉಡುಪಿ ಜಿಲ್ಲೆಯವರಾದ ಮಹಾವೀರ್ ಜೈನ್, ಅರ್ಧಕ್ಕೆ ವಿದ್ಯಾಭ್ಯಾಸ ಸ್ಥಗಿತಗೊಳಿಸಿ ಮುಂಬೈಗೆ ಹೋದರು. ಅಲ್ಲಿ ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡು ಡಿಪ್ಲೊಮಾ ಇನ್ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಪೂರೈಸಿದರು. ಬಳಿಕ ಬೆಂಗಳೂರಿಗೆ ಬಂದು ಹೋಟೆಲೊಂದರಲ್ಲಿ ಮುಖ್ಯ ಅಡುಗೆಯವರಾಗಿ ಕೆಲಸ ಮಾಡಿದರು.</p>.<p>***</p>.<p><br /><strong>ರೆಸ್ಟೊರೆಂಟ್: ಗ್ಲೋಬಲ್ ಕೃಷ್ಣಲೀಲಾ ವೆಜ್ ಹೋಟೆಲ್<br />ಸಮಯ: ಬೆಳಿಗ್ಗೆ 6.30ರಿಂದ ರಾತ್ರಿ 10.30ರವರೆಗೆ<br />ವಿಶೇಷ : ಉತ್ತರ–ದಕ್ಷಿಣ ಭಾರತೀಯಶೈಲಿಯ ಆಹಾರ<br />ಸ್ಥಳ: ನಂ.6, ಡಾ.ವಿಷ್ಣುವರ್ಧನ್ ರಸ್ತೆ (ಕೆಂಗೇರಿ– ಉತ್ತರಹಳ್ಳಿ ರಸ್ತೆ), ಮೈಲಸಂದ್ರ, ಬಿಜಿಎಸ್ಆಸ್ಪತ್ರೆ ಸಮೀಪ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>