<p><strong>ಬೆಂಗಳೂರು:</strong> ಎಟಿಎಂನಿಂದ ಹಣ ತೆಗೆಯಲು ಗೊತ್ತಿಲ್ಲದ ಮಹಿಳೆಯೊಬ್ಬರನ್ನು ನಂಬಿಸಿ, ಎಟಿಎಂ ಕಾರ್ಡ್ನ್ನೇ ಅದಲುಬದಲು ಮಾಡಿ ₹ 37 ಸಾವಿರ ಎಗರಿಸಿದ ಘಟನೆ ಮೆಜೆಸ್ಟಿಕ್ನಲ್ಲಿರುವ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.</p>.<p>ದಾಸರಹಳ್ಳಿ ನಿವಾಸಿ ಉಮಾದೇವಿ ಹಣ ಕಳೆದುಕೊಂಡವರು. ಬಿಎಂಟಿಸಿ ಬಸ್ ನಿಲ್ದಾಣದಲ್ಲಿರುವ ಕೆನರಾ ಬ್ಯಾಂಕಿನ ಎಟಿಎಂ ಕೇಂದ್ರಕ್ಕೆ ಶನಿವಾರ ಮಧ್ಯಾಹ್ನ 1.45ಕ್ಕೆ ತೆರಳಿದ್ದ ಉಮಾದೇವಿ, ಹಣ ತೆಗೆಯಲು ಗೊತ್ತಿಲ್ಲದ ಕಾರಣಕ್ಕೆ ಅಲ್ಲೇ ಇದ್ದ ವ್ಯಕ್ತಿಯೊಬ್ಬನಿಗೆ ಎಟಿಎಂ ಕಾರ್ಡ್ ಕೊಟ್ಟು ₹ 2 ಸಾವಿರ ತೆಗೆದುಕೊಡುವಂತೆ ತಿಳಿಸಿದ್ದರು.</p>.<p>ಆ ವ್ಯಕ್ತಿ, ಎಟಿಎಂ ಕೇಂದ್ರದಲ್ಲಿ ವ್ಯವಹರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಇರುವುದರಿಂದ ಪಕ್ಕದಲ್ಲಿದ್ದ ಕರ್ನಾಟಕ ಬ್ಯಾಂಕಿನ ಎಟಿಎಂ ಕೇಂದ್ರಕ್ಕೆ ಉಮಾದೇವಿ ಅವರನ್ನು ಕರೆದುಕೊಂಡು ಹೋಗಿದ್ದ. ಅಲ್ಲಿ ಎಟಿಎಂ ಕಾರ್ಡ್ ಪಡೆದುಕೊಂಡು, ಹಣ ತೆಗೆದುಕೊಡುವುದಾಗಿ ನಂಬಿಸಿ ಪಿನ್ ನಂಬರ್ ಪಡೆದುಕೊಂಡ ಆ ವ್ಯಕ್ತಿ, ಹಣ ತೆಗೆಯುವಂತೆ ನಟಿಸಿದ್ದ. ಆದರೆ, ಹಣದ ಬದಲು ಬ್ಯಾಲೆನ್ಸ್ ಸ್ಲಿಪ್ ಸಹಿತ ಎಸ್ಬಿಐ ಬ್ಯಾಂಕಿನ ಎಟಿಎಂ ಕಾರ್ಡ್ ಕೊಟ್ಟು, ‘ಹಣ ಬರಲಿದೆ. ಸ್ವಲ್ಪ ಕಾಯುವಂತೆ’ ಹೇಳಿ ಅಲ್ಲಿಂದ ಜಾಗ ಖಾಲಿ ಮಾಡಿದ್ದ.</p>.<p>ಆದರೆ, ಕೆಲಹೊತ್ತಿನ ಬಳಿಕ ಕಾರ್ಡ್ ಬದಲಾಗಿರುವುದು ಗೊತ್ತಾಗುತ್ತಲೇ ಉಮಾದೇವಿ ಅವರು ಬಸವೇಶ್ವರ ನಗರದಲ್ಲಿರುವ ಕೆನರಾ ಬ್ಯಾಂಕಿನ ವ್ಯವಸ್ಥಾಪಕರಿಗೆ ಕರೆ ಮಾಡಿ ಕಾರ್ಡ್ ಸ್ಥಗಿತಗೊಳಿಸುವಂತೆ ತಿಳಿಸಿದ್ದರು. ಅಷ್ಟೇ ಅಲ್ಲ, ಖಾತೆಯಲ್ಲಿರುವ ಹಣದ ಬಗ್ಗೆಯೂ ವಿಚಾರಿಸಿದ್ದರು.</p>.<p>ಆದರೆ, ಮಧ್ಯಾಹ್ನ 2.22ರ ಸುಮಾರಿಗೆ ಸುದರ್ಶನ ಲಾಡ್ಜ್ನ ಬಳಿಯ ಎಸ್ಬಿಐ ಎಟಿಎಂ ಕೇಂದ್ರದಲ್ಲಿ ಉಮಾದೇವಿ ಅವರ ಕೆನರಾ ಬ್ಯಾಂಕಿನ ಕಾರ್ಡ್ ಬಳಸಿ ₹ 37 ಸಾವಿರ ಹಣ ತೆಗೆದಿರುವುದು ಗೊತ್ತಾಗಿದೆ.</p>.<p>ಈ ಕುರಿತಂತೆ,ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಉಮಾದೇವಿ ದೂರು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಎಟಿಎಂನಿಂದ ಹಣ ತೆಗೆಯಲು ಗೊತ್ತಿಲ್ಲದ ಮಹಿಳೆಯೊಬ್ಬರನ್ನು ನಂಬಿಸಿ, ಎಟಿಎಂ ಕಾರ್ಡ್ನ್ನೇ ಅದಲುಬದಲು ಮಾಡಿ ₹ 37 ಸಾವಿರ ಎಗರಿಸಿದ ಘಟನೆ ಮೆಜೆಸ್ಟಿಕ್ನಲ್ಲಿರುವ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.</p>.<p>ದಾಸರಹಳ್ಳಿ ನಿವಾಸಿ ಉಮಾದೇವಿ ಹಣ ಕಳೆದುಕೊಂಡವರು. ಬಿಎಂಟಿಸಿ ಬಸ್ ನಿಲ್ದಾಣದಲ್ಲಿರುವ ಕೆನರಾ ಬ್ಯಾಂಕಿನ ಎಟಿಎಂ ಕೇಂದ್ರಕ್ಕೆ ಶನಿವಾರ ಮಧ್ಯಾಹ್ನ 1.45ಕ್ಕೆ ತೆರಳಿದ್ದ ಉಮಾದೇವಿ, ಹಣ ತೆಗೆಯಲು ಗೊತ್ತಿಲ್ಲದ ಕಾರಣಕ್ಕೆ ಅಲ್ಲೇ ಇದ್ದ ವ್ಯಕ್ತಿಯೊಬ್ಬನಿಗೆ ಎಟಿಎಂ ಕಾರ್ಡ್ ಕೊಟ್ಟು ₹ 2 ಸಾವಿರ ತೆಗೆದುಕೊಡುವಂತೆ ತಿಳಿಸಿದ್ದರು.</p>.<p>ಆ ವ್ಯಕ್ತಿ, ಎಟಿಎಂ ಕೇಂದ್ರದಲ್ಲಿ ವ್ಯವಹರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಇರುವುದರಿಂದ ಪಕ್ಕದಲ್ಲಿದ್ದ ಕರ್ನಾಟಕ ಬ್ಯಾಂಕಿನ ಎಟಿಎಂ ಕೇಂದ್ರಕ್ಕೆ ಉಮಾದೇವಿ ಅವರನ್ನು ಕರೆದುಕೊಂಡು ಹೋಗಿದ್ದ. ಅಲ್ಲಿ ಎಟಿಎಂ ಕಾರ್ಡ್ ಪಡೆದುಕೊಂಡು, ಹಣ ತೆಗೆದುಕೊಡುವುದಾಗಿ ನಂಬಿಸಿ ಪಿನ್ ನಂಬರ್ ಪಡೆದುಕೊಂಡ ಆ ವ್ಯಕ್ತಿ, ಹಣ ತೆಗೆಯುವಂತೆ ನಟಿಸಿದ್ದ. ಆದರೆ, ಹಣದ ಬದಲು ಬ್ಯಾಲೆನ್ಸ್ ಸ್ಲಿಪ್ ಸಹಿತ ಎಸ್ಬಿಐ ಬ್ಯಾಂಕಿನ ಎಟಿಎಂ ಕಾರ್ಡ್ ಕೊಟ್ಟು, ‘ಹಣ ಬರಲಿದೆ. ಸ್ವಲ್ಪ ಕಾಯುವಂತೆ’ ಹೇಳಿ ಅಲ್ಲಿಂದ ಜಾಗ ಖಾಲಿ ಮಾಡಿದ್ದ.</p>.<p>ಆದರೆ, ಕೆಲಹೊತ್ತಿನ ಬಳಿಕ ಕಾರ್ಡ್ ಬದಲಾಗಿರುವುದು ಗೊತ್ತಾಗುತ್ತಲೇ ಉಮಾದೇವಿ ಅವರು ಬಸವೇಶ್ವರ ನಗರದಲ್ಲಿರುವ ಕೆನರಾ ಬ್ಯಾಂಕಿನ ವ್ಯವಸ್ಥಾಪಕರಿಗೆ ಕರೆ ಮಾಡಿ ಕಾರ್ಡ್ ಸ್ಥಗಿತಗೊಳಿಸುವಂತೆ ತಿಳಿಸಿದ್ದರು. ಅಷ್ಟೇ ಅಲ್ಲ, ಖಾತೆಯಲ್ಲಿರುವ ಹಣದ ಬಗ್ಗೆಯೂ ವಿಚಾರಿಸಿದ್ದರು.</p>.<p>ಆದರೆ, ಮಧ್ಯಾಹ್ನ 2.22ರ ಸುಮಾರಿಗೆ ಸುದರ್ಶನ ಲಾಡ್ಜ್ನ ಬಳಿಯ ಎಸ್ಬಿಐ ಎಟಿಎಂ ಕೇಂದ್ರದಲ್ಲಿ ಉಮಾದೇವಿ ಅವರ ಕೆನರಾ ಬ್ಯಾಂಕಿನ ಕಾರ್ಡ್ ಬಳಸಿ ₹ 37 ಸಾವಿರ ಹಣ ತೆಗೆದಿರುವುದು ಗೊತ್ತಾಗಿದೆ.</p>.<p>ಈ ಕುರಿತಂತೆ,ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಉಮಾದೇವಿ ದೂರು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>