<p>ವತ್ತಾರೇಗೆ ಹಾಲಕ್ಕಿಯೊಂದು ಮಸಣದ ಮರದ ಮ್ಯಾಲೆ ಕೂಕಂದು ಯೋಚನೆ ಮಾಡ್ತಿತ್ತು. ಬುಡುಬುಡಿಕಣ್ಣ ಬ್ಯಾರೆ ‘ಇನ್ನು ಮ್ಯಾಲೆ ನಾನು ಶಕುನ ನುಡಿಯಕ್ಕೆ ಹೋಗ್ಕುಲ್ಲ ಕಣವ್ವ. ಬೀದಿನಾಯಿಗಳು ಅಟ್ಟಿಸಿಕ್ಯಬತ್ತವೆ’ ಅಂತ ನೊಂದಕತಿದ್ದ. ಅಲ್ಲದುರೆ ತಾನೆ ಈ ಕಂಟಕದ ಕಾಲದೇಲಿ ಶಕುನ ನುಡಿಯಕೇನದೆ ಅಂದ್ಕತಿತ್ತು ಹಾಲಕ್ಕಿ.</p>.<p>ಆಟೊತ್ತಿಗೆ ಇನ್ನೊಂದು ಹಾಲಕ್ಕಿ ಪುರ್ರನೆ ಹಾರಿ ಬಂದು ನಮ್ಮ ಹಾಲಕ್ಕಿ ಪಕ್ಕ ಕೂತುಗಂದು ಮಾತಿಗೆ ಶುರು ಹಚ್ಚಿಗ್ಯತ್ತು.</p>.<p>‘ಇದ್ಯಾಕೆ ನನತಾಯಿ, ಮುಂಗೋಳಿ ಕೂಗೋ ಹೊತ್ತಲ್ಲಿ ಹಿಂಗೆ ಅಡ್ಡಗ್ಯಾನಾಗಿ ಕೂತಿದ್ದಯ್?’ ಅಂತು.</p>.<p>‘ಕಾಲ ಕೆಟ್ಟೋತು ಕನಕ್ಕ. ಶಾಸಕರೇ ಜುಲುಮೆ ಮಾಡಿ ಲಂಚ ಈಸುಗಂದು ಸಿಗೇಬಿದ್ದವರಂತೆ. ಕಮೀಶನ್ ಆತು, ಈಗ ಎಲ್ಲಾದರಲ್ಲೂ ಸಟ್ಟುಗ ಅಲ್ಲಾಡ್ಸಕ್ಕೋತಾವೆ’.</p>.<p>‘ದಿಟ ಕನೆ. ಖಾದಿ ಇಕ್ಕ್ಯಂದವರು ಗಾಂಧಿ ಹೆಸರನೇ ಗೈರುವಿಲೆ ಮಾಡಿಬುಟ್ಟವ್ರೆ. ಖಾಕಿ ಇಕ್ಕ್ಯಂದೋರು ಚಾಕರಿ ಬುಟ್ಟು ಪೋಕರಿಗಳಾಗ್ಯವರೆ. ಊರೊಟ್ಟಿನ ಜನಕೆಲ್ಲಾ ಧರ್ಮ–ಕರ್ಮ ಹೇಳಬೇಕಾದ ಕಾವಿ ಇಕ್ಕಿದವು ಅಲಾಯಿದವಾದ ಕ್ಯಾಮೇಲೆ ಕಳೆದೋಗ್ಯವೆ’.</p>.<p>‘ಜನ ಬೂವಕ್ಕೆ ಬಾಗಾಡಿಕ್ಯಂದು ವತ್ತರಿಕೆಂಗೆ ರಾತ್ರಿಗೆಂಗೆ ಅಂತ ಬದುಕು ನೀಸ್ತಾವ್ರೆ. ಖಾಕಿ, ಖಾವಿ, ಖಾದಿಯೋರು ಲಂಗುಲಗಾಮು, ಅಂಕೆಶಂಕೆ ಇಲ್ಲದೇ ತೆವಲಿಗೋಸ್ಕರಾನೆ ಬದುಕ್ತಾವೆ ಅನ್ನಿಸ್ತದೆ ಕನೆ’.</p>.<p>‘ತೆವಲು ಅಂದಾಗ ನೆಪ್ಪಾತು ನೋಡು. ಶಿರಸೀಲಿ ಒಬ್ಬ ಪಂಚಾಯಿತಿ ಸದಸ್ಯ ಆಯಪ್ಪನಿಗೆ ಬಂದ ಗೌರವಧನದಲ್ಲಿ ಬಸ್ ನಿಲ್ದಾಣ ಮಾಡಿಸ್ಯವನಂತೆ. ರಾಜಕೀಯದವು ಎಲ್ಲೋಗಿ ಕುಂತವೋ?’</p>.<p>‘ಅವುಗಳ ಹಣೆಬರಾವು ಅವು ಅನುಭೋಗಿಸ್ತವೆ ಬುಡೆ. ಯಂಗನ್ನ ಆಗಲಿ ಒಂದು ಬುದ್ಧಿ ಮಾತು ಹೇಳಿಬುಡವ್ವ’.</p>.<p>‘ನನ ತಾಯಿ. ನಮ್ಮ ಹಾಲಕ್ಕಿ ಶಕುನಕ್ಕೂ ಟ್ಯಾಕ್ಸು ಜಡಿದುಬುಡ್ತರೆ ಕನೆ. ಆದ್ರೂ ಖಾಕಿ, ಖಾದಿಗಳಿಗೆ ಒಂದು ಮಾತೇಳತಿನಿ. ಸಿಕ್ಕಿದ್ದಕ್ಕೆ ಖುಷಿ ಪಡಬ್ಯಾಡಿ, ಸಿಗಲಿಲ್ಲಾಂತ ಬೈಬ್ಯಾಡಿ. ಆತ್ಮಾವಲೋಕನ ಮಾಡಿಕ್ಯಳಿ, ಆತ್ಮವಂಚನೆ ಮಾಡಿಕ್ಯಬ್ಯಾಡಿ ಅಂತ ಹಾಲಕ್ಕಿ ನುಡಿತೈತೆ’ ಎಂದು ಹಾಲಕ್ಕಿ ಗುಕ್, ಗುಕ್ ಅಂದ್ಕಂದು ಹಾರೋಯ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವತ್ತಾರೇಗೆ ಹಾಲಕ್ಕಿಯೊಂದು ಮಸಣದ ಮರದ ಮ್ಯಾಲೆ ಕೂಕಂದು ಯೋಚನೆ ಮಾಡ್ತಿತ್ತು. ಬುಡುಬುಡಿಕಣ್ಣ ಬ್ಯಾರೆ ‘ಇನ್ನು ಮ್ಯಾಲೆ ನಾನು ಶಕುನ ನುಡಿಯಕ್ಕೆ ಹೋಗ್ಕುಲ್ಲ ಕಣವ್ವ. ಬೀದಿನಾಯಿಗಳು ಅಟ್ಟಿಸಿಕ್ಯಬತ್ತವೆ’ ಅಂತ ನೊಂದಕತಿದ್ದ. ಅಲ್ಲದುರೆ ತಾನೆ ಈ ಕಂಟಕದ ಕಾಲದೇಲಿ ಶಕುನ ನುಡಿಯಕೇನದೆ ಅಂದ್ಕತಿತ್ತು ಹಾಲಕ್ಕಿ.</p>.<p>ಆಟೊತ್ತಿಗೆ ಇನ್ನೊಂದು ಹಾಲಕ್ಕಿ ಪುರ್ರನೆ ಹಾರಿ ಬಂದು ನಮ್ಮ ಹಾಲಕ್ಕಿ ಪಕ್ಕ ಕೂತುಗಂದು ಮಾತಿಗೆ ಶುರು ಹಚ್ಚಿಗ್ಯತ್ತು.</p>.<p>‘ಇದ್ಯಾಕೆ ನನತಾಯಿ, ಮುಂಗೋಳಿ ಕೂಗೋ ಹೊತ್ತಲ್ಲಿ ಹಿಂಗೆ ಅಡ್ಡಗ್ಯಾನಾಗಿ ಕೂತಿದ್ದಯ್?’ ಅಂತು.</p>.<p>‘ಕಾಲ ಕೆಟ್ಟೋತು ಕನಕ್ಕ. ಶಾಸಕರೇ ಜುಲುಮೆ ಮಾಡಿ ಲಂಚ ಈಸುಗಂದು ಸಿಗೇಬಿದ್ದವರಂತೆ. ಕಮೀಶನ್ ಆತು, ಈಗ ಎಲ್ಲಾದರಲ್ಲೂ ಸಟ್ಟುಗ ಅಲ್ಲಾಡ್ಸಕ್ಕೋತಾವೆ’.</p>.<p>‘ದಿಟ ಕನೆ. ಖಾದಿ ಇಕ್ಕ್ಯಂದವರು ಗಾಂಧಿ ಹೆಸರನೇ ಗೈರುವಿಲೆ ಮಾಡಿಬುಟ್ಟವ್ರೆ. ಖಾಕಿ ಇಕ್ಕ್ಯಂದೋರು ಚಾಕರಿ ಬುಟ್ಟು ಪೋಕರಿಗಳಾಗ್ಯವರೆ. ಊರೊಟ್ಟಿನ ಜನಕೆಲ್ಲಾ ಧರ್ಮ–ಕರ್ಮ ಹೇಳಬೇಕಾದ ಕಾವಿ ಇಕ್ಕಿದವು ಅಲಾಯಿದವಾದ ಕ್ಯಾಮೇಲೆ ಕಳೆದೋಗ್ಯವೆ’.</p>.<p>‘ಜನ ಬೂವಕ್ಕೆ ಬಾಗಾಡಿಕ್ಯಂದು ವತ್ತರಿಕೆಂಗೆ ರಾತ್ರಿಗೆಂಗೆ ಅಂತ ಬದುಕು ನೀಸ್ತಾವ್ರೆ. ಖಾಕಿ, ಖಾವಿ, ಖಾದಿಯೋರು ಲಂಗುಲಗಾಮು, ಅಂಕೆಶಂಕೆ ಇಲ್ಲದೇ ತೆವಲಿಗೋಸ್ಕರಾನೆ ಬದುಕ್ತಾವೆ ಅನ್ನಿಸ್ತದೆ ಕನೆ’.</p>.<p>‘ತೆವಲು ಅಂದಾಗ ನೆಪ್ಪಾತು ನೋಡು. ಶಿರಸೀಲಿ ಒಬ್ಬ ಪಂಚಾಯಿತಿ ಸದಸ್ಯ ಆಯಪ್ಪನಿಗೆ ಬಂದ ಗೌರವಧನದಲ್ಲಿ ಬಸ್ ನಿಲ್ದಾಣ ಮಾಡಿಸ್ಯವನಂತೆ. ರಾಜಕೀಯದವು ಎಲ್ಲೋಗಿ ಕುಂತವೋ?’</p>.<p>‘ಅವುಗಳ ಹಣೆಬರಾವು ಅವು ಅನುಭೋಗಿಸ್ತವೆ ಬುಡೆ. ಯಂಗನ್ನ ಆಗಲಿ ಒಂದು ಬುದ್ಧಿ ಮಾತು ಹೇಳಿಬುಡವ್ವ’.</p>.<p>‘ನನ ತಾಯಿ. ನಮ್ಮ ಹಾಲಕ್ಕಿ ಶಕುನಕ್ಕೂ ಟ್ಯಾಕ್ಸು ಜಡಿದುಬುಡ್ತರೆ ಕನೆ. ಆದ್ರೂ ಖಾಕಿ, ಖಾದಿಗಳಿಗೆ ಒಂದು ಮಾತೇಳತಿನಿ. ಸಿಕ್ಕಿದ್ದಕ್ಕೆ ಖುಷಿ ಪಡಬ್ಯಾಡಿ, ಸಿಗಲಿಲ್ಲಾಂತ ಬೈಬ್ಯಾಡಿ. ಆತ್ಮಾವಲೋಕನ ಮಾಡಿಕ್ಯಳಿ, ಆತ್ಮವಂಚನೆ ಮಾಡಿಕ್ಯಬ್ಯಾಡಿ ಅಂತ ಹಾಲಕ್ಕಿ ನುಡಿತೈತೆ’ ಎಂದು ಹಾಲಕ್ಕಿ ಗುಕ್, ಗುಕ್ ಅಂದ್ಕಂದು ಹಾರೋಯ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>