<p><strong>ಹುಬ್ಬಳ್ಳಿ:</strong> ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ ಗದುಗಿನ ಸುನಿಲ್ ಜೋಶಿ ಅವರ ವೃತ್ತಿಜೀವನದಲ್ಲಿ ಮಂಗಳವಾರ ಅವಿಸ್ಮರಣೀಯ ದಿನವಾಯಿತು. ರಾಜನಗರದ ಕೆಎಸ್ಸಿಎ ಕ್ರೀಡಾಂಗಣದ ಪೆವಿಲಿಯನ್ ಬ್ಲಾಕ್ಗೆ ಸುನಿಲ್ ಜೋಶಿ ಅವರ ಹೆಸರು ನಾಮಕರಣ ಮಾಡಲಾಯಿತು. </p>.<p>ರಣಜಿ ಫೈನಲ್ ಪಂದ್ಯದ ಊಟದ ವಿರಾಮದ ವೇಳೆ ನಡೆದ ಕಾರ್ಯಕ್ರಮದಲ್ಲಿ ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಅವರು ನಾಮಫಲಕ ಅನಾವರಣ ಮಾಡಿದರು.</p>.<p>ಈ ವೇಳೆ ಮಾತನಾಡಿದ ಸುನಿಲ್ ಜೋಶಿ ಭಾವುಕರಾದರು. ತಮ್ಮ ತರಬೇತುದಾರರನ್ನು ಸ್ಮರಿಸಿದ ಅವರು, ಗದಗ, ಹುಬ್ಬಳ್ಳಿಯ ಮೈದಾನಗಳಲ್ಲಿ ಆಡಿದ ದಿನಗಳನ್ನು ಮೆಲುಕು ಹಾಕಿದರು.</p>.<p>‘ಇಂತಹ ದಿನ ಬರುತ್ತದೆ ಎಂದು ನಾನು ಭಾವಿಸಿರಲಿಲ್ಲ. ಗದಗಿನಿಂದ ಹುಬ್ಬಳ್ಳಿಗೆ ಬಂದ 14 ವರ್ಷದ ಬಾಲಕ ಈ ಮಟ್ಟಕ್ಕೆ ಬರುತ್ತಾನೆ ಎಂದು ನಿರೀಕ್ಷಿಸಿರಲಿಲ್ಲ. ಸಹೋದರ ಅಶೋಕ ನನ್ನ ಮೇಲೆ ನಂಬಿಕೆ ಇಟ್ಟಿದ್ದ. ನನ್ನ ಪತ್ನಿ ಡಾ. ರವನೀತ್ ಜೋಶಿ ಸದಾ ಬೆಂಬಲವಾಗಿದ್ದಾರೆ. ಭಾರತ ತಂಡಕ್ಕೆ ಆಡುವುದಕ್ಕಿಂತ ದೊಡ್ಡ ಖುಷಿ ಬೇರೆ ಇಲ್ಲ’ ಎಂದು ಜೋಶಿ ಹೇಳಿದರು.</p>.<p>‘ಪೆವಿಲಿಯನ್ ಬ್ಲಾಕ್ಗೆ ನನ್ನ ಹೆಸರಿಡಲಾಗಿದೆ. ಅದರಿಂದ ಪ್ರೇರಣೆ ಪಡೆದು ಒಬ್ಬ ಗ್ರಾಮೀಣ ಭಾಗದ ಆಟಗಾರ ಕರ್ನಾಟಕ, ಭಾರತ ತಂಡಕ್ಕೆ ಆಡಿದರೆ ಅದಕ್ಕೆ ಸಾರ್ಥಕತೆ ಬರುತ್ತದೆ’ ಎಂದರು. </p>.<p>‘1992ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ರಣಜಿ ಪಂದ್ಯದಲ್ಲಿ ನಾನು ಪದಾರ್ಪಣೆ ಮಾಡಿದೆ. ಆ ಪಂದ್ಯದಲ್ಲಿ ವೆಂಕಟೇಶ ಪ್ರಸಾದ್ ಅವರೊಂದಿಗೆ ಅಜೇಯ ಜತೆಯಾಟವಾಡಿದ್ದೆ. ಇಂದಿಗೂ ಅವರೊಂದಿಗೆ ಅವಿನಾಭಾವ ಸಂಬಂಧ ಇದೆ’ ಎಂದರು.</p>.<p>ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ವೆಂಕಟೇಶ ಪ್ರಸಾದ್, ಉಪಾಧ್ಯಕ್ಷ ಸುಜಿತ್ ಸೋಮಸುಂದರ್, ಕಾರ್ಯದರ್ಶಿ ಸಂತೋಷ ಮೆನನ್, ಖಜಾಂಚಿ ಬಿ.ಎನ್.ಮಧುಕರ್, ಕೆಸ್ಎಸ್ಸಿಎ ಧಾರವಾಡ ವಲಯದ ನಿಮಂತ್ರಕ ವೀರಣ್ಣ ಸವಡಿ, ಚೇರ್ಮನ್ ಅಲ್ತಾಫ್ ಕಿತ್ತೂರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ ಗದುಗಿನ ಸುನಿಲ್ ಜೋಶಿ ಅವರ ವೃತ್ತಿಜೀವನದಲ್ಲಿ ಮಂಗಳವಾರ ಅವಿಸ್ಮರಣೀಯ ದಿನವಾಯಿತು. ರಾಜನಗರದ ಕೆಎಸ್ಸಿಎ ಕ್ರೀಡಾಂಗಣದ ಪೆವಿಲಿಯನ್ ಬ್ಲಾಕ್ಗೆ ಸುನಿಲ್ ಜೋಶಿ ಅವರ ಹೆಸರು ನಾಮಕರಣ ಮಾಡಲಾಯಿತು. </p>.<p>ರಣಜಿ ಫೈನಲ್ ಪಂದ್ಯದ ಊಟದ ವಿರಾಮದ ವೇಳೆ ನಡೆದ ಕಾರ್ಯಕ್ರಮದಲ್ಲಿ ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಅವರು ನಾಮಫಲಕ ಅನಾವರಣ ಮಾಡಿದರು.</p>.<p>ಈ ವೇಳೆ ಮಾತನಾಡಿದ ಸುನಿಲ್ ಜೋಶಿ ಭಾವುಕರಾದರು. ತಮ್ಮ ತರಬೇತುದಾರರನ್ನು ಸ್ಮರಿಸಿದ ಅವರು, ಗದಗ, ಹುಬ್ಬಳ್ಳಿಯ ಮೈದಾನಗಳಲ್ಲಿ ಆಡಿದ ದಿನಗಳನ್ನು ಮೆಲುಕು ಹಾಕಿದರು.</p>.<p>‘ಇಂತಹ ದಿನ ಬರುತ್ತದೆ ಎಂದು ನಾನು ಭಾವಿಸಿರಲಿಲ್ಲ. ಗದಗಿನಿಂದ ಹುಬ್ಬಳ್ಳಿಗೆ ಬಂದ 14 ವರ್ಷದ ಬಾಲಕ ಈ ಮಟ್ಟಕ್ಕೆ ಬರುತ್ತಾನೆ ಎಂದು ನಿರೀಕ್ಷಿಸಿರಲಿಲ್ಲ. ಸಹೋದರ ಅಶೋಕ ನನ್ನ ಮೇಲೆ ನಂಬಿಕೆ ಇಟ್ಟಿದ್ದ. ನನ್ನ ಪತ್ನಿ ಡಾ. ರವನೀತ್ ಜೋಶಿ ಸದಾ ಬೆಂಬಲವಾಗಿದ್ದಾರೆ. ಭಾರತ ತಂಡಕ್ಕೆ ಆಡುವುದಕ್ಕಿಂತ ದೊಡ್ಡ ಖುಷಿ ಬೇರೆ ಇಲ್ಲ’ ಎಂದು ಜೋಶಿ ಹೇಳಿದರು.</p>.<p>‘ಪೆವಿಲಿಯನ್ ಬ್ಲಾಕ್ಗೆ ನನ್ನ ಹೆಸರಿಡಲಾಗಿದೆ. ಅದರಿಂದ ಪ್ರೇರಣೆ ಪಡೆದು ಒಬ್ಬ ಗ್ರಾಮೀಣ ಭಾಗದ ಆಟಗಾರ ಕರ್ನಾಟಕ, ಭಾರತ ತಂಡಕ್ಕೆ ಆಡಿದರೆ ಅದಕ್ಕೆ ಸಾರ್ಥಕತೆ ಬರುತ್ತದೆ’ ಎಂದರು. </p>.<p>‘1992ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ರಣಜಿ ಪಂದ್ಯದಲ್ಲಿ ನಾನು ಪದಾರ್ಪಣೆ ಮಾಡಿದೆ. ಆ ಪಂದ್ಯದಲ್ಲಿ ವೆಂಕಟೇಶ ಪ್ರಸಾದ್ ಅವರೊಂದಿಗೆ ಅಜೇಯ ಜತೆಯಾಟವಾಡಿದ್ದೆ. ಇಂದಿಗೂ ಅವರೊಂದಿಗೆ ಅವಿನಾಭಾವ ಸಂಬಂಧ ಇದೆ’ ಎಂದರು.</p>.<p>ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ವೆಂಕಟೇಶ ಪ್ರಸಾದ್, ಉಪಾಧ್ಯಕ್ಷ ಸುಜಿತ್ ಸೋಮಸುಂದರ್, ಕಾರ್ಯದರ್ಶಿ ಸಂತೋಷ ಮೆನನ್, ಖಜಾಂಚಿ ಬಿ.ಎನ್.ಮಧುಕರ್, ಕೆಸ್ಎಸ್ಸಿಎ ಧಾರವಾಡ ವಲಯದ ನಿಮಂತ್ರಕ ವೀರಣ್ಣ ಸವಡಿ, ಚೇರ್ಮನ್ ಅಲ್ತಾಫ್ ಕಿತ್ತೂರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>